Advertisement

ಡಿಸ್ನಿಲ್ಯಾಂಡ್‌ ಕೈಬಿಡಲ್ಲ: ಸಿಎಂ ಪುನರುಚ್ಛಾರ 

01:19 AM Feb 20, 2019 | Team Udayavani |

ಮಂಡ್ಯ: ಕೃಷ್ಣರಾಜಸಾಗರ ಸಮೀಪ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಬೃಂದಾವನವನ್ನು ಅಭಿವೃದ್ಧಿಪಡಿಸುವುದು ನನ್ನ ಕನಸಿನ ಯೋಜನೆ. ಅದನ್ನು ಮಾಡಿಯೇ ತೀರುವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಡಿಸ್ನಿಲ್ಯಾಂಡ್‌ ಬೇಡ ಎಂದು ಹೋರಾಟ ಮಾಡುವವರಲ್ಲಿ ನಾನು ಕೈಮುಗಿದು ಮನವಿ ಮಾಡುತ್ತೇನೆ. ಕೆಆರ್‌ಎಸ್‌ ನಮ್ಮ ಆಸ್ತಿ. ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದಿಲ್ಲ. ಅಣೆಕಟ್ಟೆಗೆ ಧಕ್ಕೆಯಾಗದಂತೆ ನೈಪುಣ್ಯತೆ ಹೊಂದಿರುವವರನ್ನು ಕರೆತಂದು ಡಿಸ್ನಿಲ್ಯಾಂಡ್‌ ನಿರ್ಮಿಸುವೆ. ಇದರಿಂದ 40 ರಿಂದ 50 ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ನನ್ನ ಸರ್ಕಾರದ ಡೆಡ್‌ಲೈನ್‌ ನಿರ್ಧರಿಸು ವವರು ಯಾರೂ ಅಲ್ಲ. ತಾಯಿ ಚಾಮುಂಡೇಶ್ವ ರಿಗೆ ಮಾತ್ರ ಆ ಶಕ್ತಿ ಇರೋದು. ಬಿಜೆಪಿಯವರು ಸಂಕ್ರಾಂತಿಯಿಂದಲೇ ನನ್ನ ಸರ್ಕಾರಕ್ಕೆ ಡೆಡ್‌ಲೈನ್‌ ಕೊಡುತ್ತಾ ಬಂದಿದ್ದರು. ಸರ್ಕಾರದ ಡೆಡ್‌ಲೈನ್‌ ನಿರ್ಧರಿಸುವುದು ಚಾಮುಂಡೇಶ್ವರಿಯೇ ಹೊರತು ಮಾನವರಿಂದ ಕೊಡಲಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next