Advertisement

ಸಂಪುಟದಿಂದ ರಮೇಶ್‌ ವಜಾ ಮಾಡಲು ಮನವಿ

10:15 AM Oct 10, 2018 | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಗೆ ಸತತ ಮೂರು ಬಾರಿ ಗೈರು ಹಾಜರಾಗಿರುವ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯಪಾಲ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ್ದ ಭೀಮಪ್ಪ ಗಡಾದ, “ನನಗೆ ಮಂತ್ರಿಗಿರಿಗಿಂತ ದೇವರೇ ಮುಖ್ಯ.
ನಾನು ದೇವರಲ್ಲಿ ಬೇಡಿಕೊಂಡಿರುವ ಆಸೆ ಈಡೇರುವವರೆಗೆ ಯಾವುದೇ ಪ್ರಮುಖ ಕೆಲಸ ಕೈಗೊಳ್ಳುವುದಿಲ್ಲ ಮತ್ತು ಸರ್ಕಾರ ನೀಡಿರುವ ವಾಹನ
ಕೂಡ ಹತ್ತುವುದಿಲ್ಲ. ಅಲ್ಲದೆ, ಈವರೆಗೆ ಐದು ಸಚಿವ ಸಂಪುಟ ಸಭೆಗೆ ಹಾಜರಾಗಿರುವುದಿಲ್ಲ’ ಎಂದು ರಮೇಶ್‌ ಜಾರಕಿಹೊಳಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಆವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಇದೇ ದೂರನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next