Advertisement

ಬಹಿರಂಗ ಚರ್ಚೆ: ಬೆಳಗಾವಿ ರುದ್ರಾಕ್ಷಿ ಮಠಕ್ಕೆ ಸ್ಥಳಾಂತರ

09:10 AM Dec 31, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ, ವೀರಶೈವ ಪ್ರತ್ಯೇಕ ವಿವಾದ ಕುರಿತಾದ ಚರ್ಚೆಯನ್ನು ಬೆಳಗಾವಿಯ ನಾಗನೂರು
ರುದ್ರಾಕ್ಷಿಮಠದಲ್ಲಿ ನಡೆಸಲು ನಿರ್ಧರಿಸಲಾಗಿದೆ.

Advertisement

ಜ.28, 29 ಇಲ್ಲವೆ 31 ಈ ಮೂರು ದಿನಗಳಲ್ಲಿ ಯಾವುದಾದರು ಒಂದು ದಿನ ಚರ್ಚೆಗೆ ಸಿದ್ಧ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ, ವೀರಶೈವ ವಿವಾದ ಕುರಿತಾದ ಚರ್ಚೆಗೆ ಮೂರುಸಾವಿರ ಮಠದಲ್ಲಿ ಅನುಮತಿ ನೀಡದ ಕಾರಣ ಸಭೆಯನ್ನು ಬೆಳಗಾವಿ ರುದ್ರಾಕ್ಷಿಮಠದಲ್ಲಿ ನಡೆಸಲು
ನಿರ್ಧರಿಸಲಾಗಿದೆ.

ಜನವರಿಯಲ್ಲಿ ನೀಡಿದ ಮೂರು ದಿನಗಳಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಯಾವ ದಿನಾಂಕಕ್ಕೆ ಒಪ್ಪುತ್ತಾರೋ ಆ ದಿನ
ಚರ್ಚೆಗೆ ಸಿದ್ಧ ಎಂದರು. ಬೆಳಗಾವಿಯಲ್ಲಿ ಚರ್ಚೆ ನಡೆಸುವ ಕಾರಣಕ್ಕೆ ಎರಡು ಹಂತದಲ್ಲಿ ಸಭೆ ಮಾಡಿ ಎಲ್ಲರ
ಅಭಿಪ್ರಾಯ ಸಂಗ್ರಹಿಸಿದ ನಂತರ ರುದ್ರಾಕ್ಷಿಮಠದ ಶ್ರೀಗಳೊಂದಿಗೆ ಮಾತನಾಡಿದ್ದೇವೆ. ಸಭೆ ನಡೆಸಲು ಶ್ರೀಗಳು ಸಂಪೂರ್ಣವಾಗಿ ಸಮ್ಮತಿ ನೀಡಿದ್ದಾರೆ. ನಮ್ಮ ತಂಡದಲ್ಲಿ ಹೆಚ್ಚುವರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ
ಡಾ.ಎಸ್‌.ಎಂ.ಜಾಮದಾರ ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next