Advertisement

ರಿಯಾಯಿತಿ ಪ್ರಶ್ನಿಸಿದ್ದ ಅಧಿಕಾರಿ ಎತ್ತಂಗಡಿ

03:45 AM Mar 09, 2017 | Team Udayavani |

ಮುಂಬೈ: ಯೋಗ ಗುರು ಬಾಬಾ ರಾಮ್‌ದೇವ್‌ರ ಪತಂಜಲಿ ಸಂಸ್ಥೆಗೆ ರಿಯಾಯಿತಿ ದರದಲ್ಲಿ ಭೂಮಿ ನೀಡಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ಅಂಶ ಮಾಹಿತಿಹಕ್ಕು ಕಾಯ್ದೆ ಮೂಲಕ ಬಹಿರಂಗಗೊಡಿದೆ. 

Advertisement

ಕಳೆದ ವರ್ಷ  ಮಹಾರಾಷ್ಟ್ರ ಸರ್ಕಾರವು ಫ‌ುಡ್‌ ಪಾರ್ಕ್‌ ನಿರ್ಮಾಣಕ್ಕಾಗಿ ಪತಂಜಲಿ ಸಂಸ್ಥೆಗೆ ಶೇ.75ರ ರಿಯಾಯಿತಿ ದರದಲ್ಲಿ 230 ಎಕರೆ ಭೂಮಿ ನೀಡಿತ್ತು. ಯಾವ ಆಧಾರದಲ್ಲಿ ಈ ರಿಯಾಯಿತಿ ನೀಡಲಾಗಿದೆ ಎಂದು ಪ್ರಶ್ನಿಸಿ ಹಣಕಾಸು ವಿಭಾಗದ ಹಿರಿಯ ಅಧಿಕಾರಿ ಬಿಜಯ್‌ ಕುಮಾರ್‌ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾಗಿ ಮೂರು ವಾರಕ್ಕೆ ಬಿಜಯ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವಿಸ್‌, ಭೂಮಿ ನೀಡುವ ಪ್ರಕ್ರಿಯೆ ಹರಾಜು ಮೂಲಕ ಪಾರದರ್ಶಕವಾಗಿ ನಡೆದಿದೆ. ಅಲ್ಲದೆ ಬಿಜಯ್‌ ಅವರ ವರ್ಗಾವಣೆ ಸ್ವಾಭಾವಿಕವಾಗಿ ನಡೆದಿದೆ ಎಂದಿದ್ದಾರೆ. ಎಕರೆಗೆ ಒಂದು ಕೋಟಿ ಬೆಲೆಯ ಭೂಮಿಯನ್ನು ಪತಂಜಲಿ ಸಂಸ್ಥೆಗೆ ಕೇವಲ 25 ಲಕ್ಷ ರೂ. ಬೆಲೆಗೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next