Advertisement

ಪ್ರೀಮಿಯಂಗೆ ರಿಯಾಯಿತಿ!

12:22 AM Feb 27, 2021 | Team Udayavani |

ಹೊಸದಿಲ್ಲಿ: ಜೀವ ವಿಮಾ ಪ್ರೀಮಿಯಂ ಕಂತನ್ನು ಮುಂಗಡವಾಗಿ ಪಾವತಿಸುವವರಿಗೆ ಪ್ರೀಮಿಯಂನಲ್ಲಿ ರಿಯಾಯಿತಿ ನೀಡಲು ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಆಯೋಗ (ಐಆರ್‌ಡಿಎಐ) ನಿರ್ಧರಿಸಿದೆ.  ಈ ಕುರಿತಂತೆ, ಎಲ್ಲ ವಿಮಾ ಕಂಪೆನಿಗಳಿಗೆ ಸೂಚನೆ ನೀಡಿರುವ ಆಯೋಗ, ತಮ್ಮಲ್ಲಿ ಈ ಸೌಲಭ್ಯ ಜಾರಿಗೊಳಿಸಿದ ಏಳು ದಿನಗಳೊಳಗಾಗಿ ಆಯೋಗಕ್ಕೆ ಪತ್ರ ಬರೆದು ಸೌಲಭ್ಯ ಜಾರಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದೆ.

Advertisement

ರಿಯಾಯಿತಿ ಹೇಗೆ?: ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಮುಂಗಡವಾಗಿ ಪಾವತಿ­­ಸಲಾಗುವ ಪ್ರೀಮಿಯಂಗೆ ಆ ವರ್ಷದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಉಳಿತಾಯ ಖಾತೆಗಳಿಗೆ ನೀಡುವ ವಾರ್ಷಿಕ ಬಡ್ಡಿ ದರದಷ್ಟೇ ರಿಯಾಯಿತಿಯನ್ನು ನೀಡಲು ನಿರ್ಧರಿಸ­ಲಾಗಿದೆ. ಅಂದರೆ ಒಂದು ಹಣಕಾಸು ವರ್ಷದಲ್ಲಿ ವಿಮೆಯ ಪ್ರೀಮಿಯಂ ಹಣವನ್ನು ಮುಂಗಡವಾಗಿ ಕಟ್ಟಿದರೆ, ಆ ಹಣಕಾಸು ವರ್ಷದಲ್ಲಿ ಎಸ್‌ಬಿಐ ಉಳಿತಾಯ ಖಾತೆಗಳ ಮೇಲಿನ  ಬಡ್ಡಿ ದರದಷ್ಟೇ ರಿಯಾಯಿತಿಯನ್ನು ಪ್ರೀಮಿಯಂ ಹಣದ ಮೇಲೆ ನೀಡಬೇಕು ಎಂದು ಐಆರ್‌ಡಿಎಐ ಹೇಳಿದೆ.

ಪ್ರಸ್ತುತ ಎಸ್‌ಬಿಐ ಉಳಿತಾಯ ಖಾತೆಗಳ ಮೇಲೆ ವಾರ್ಷಿಕ ಶೇ. 2.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಮುಂಗಡ ಪ್ರೀಮಿಯಂ ಕಂತಿನ ಮೊತ್ತದಲ್ಲಿ ಇಷ್ಟು ಹಣ ಕಡಿತವಾಗಿ, ಗ್ರಾಹಕರಿಗೆ ಕೊಂಚ ಉಳಿತಾಯ­ವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next