Advertisement

ದೃಢ ನಿರ್ಧಾರದಿಂದ ಪ್ಲಾಸ್ಟಿಕ್‌ ತ್ಯಜಿಸಿ

05:09 PM Oct 01, 2019 | Suhan S |

ಸಕಲೇಶಪುರ: ಎಲ್ಲರೂ ದೃಢ ನಿರ್ಧಾರದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್‌ ಬಳಕೆಯನ್ನುಸಂಪೂರ್ಣ ತ್ಯಜಿಸಲು ಪ್ರತಿಜ್ಞೆ ಮಾಡ ಬೇಕೆಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆಯಿಂದ ಏರ್ಪಡಿಸಿದ್ದ ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಜಾಥಾದಲ್ಲಿಮಾತನಾಡಿದ ಅವರು, ಪ್ಲಾಸ್ಟಿಕ್‌ ನಿಂದಾಗುವ ದುಷ್ಪರಿಣಾಮದ ಅರಿವು ಮೂಡಿಸುವುದು ಅಗತ್ಯ ಎಂದರು.

Advertisement

ತಹಶೀಲ್ದಾರ್‌ ರಕ್ಷಿತ್‌ ಮಾತನಾಡಿ, ಪ್ಲಾಸ್ಟಿಕ್‌ಗಳನ್ನು ಅಂಗಡಿಗಳಲ್ಲಿ ಹಾಗೂ ಎಲ್ಲೂ ಕೂಡ ಮಾರಾಟ ಮತ್ತು ಬಳಕೆಮಾಡುವುದು ಬೇಡ. ಬಟ್ಟೆ ಇತರೆ ಬ್ಯಾಗುಗಳನ್ನು ಮಾರಾಟ ಮತ್ತು ಬಳಕೆ ಮಾಡಬೇಕು. ಪ್ಲಾಸ್ಟಿಕ್‌ ಭೂಮಿಗೆಬಿದ್ದರೇ ಅದು ಎಷ್ಟು ವರ್ಷಗಳಾದರೂ ಕರಗುವುದಿಲ್ಲ. ಉತ್ತಮ ಭವಿಷ್ಯಕ್ಕಾಗಿ ಈಗಲೇ ಯೋಚನೆ ಮಾಡಿ ಇಂದಿನಿಂದ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಂಗಡಿಗಳಲ್ಲಿ ಯಾರು ಪ್ಲಾಸ್ಟಿಕ್‌ ಮಾರಾಟ ಮಾಡುತ್ತಾರೆ ಅವರಿಗೆ ದಂದ ವಿಧಿಸಲಾಗುತ್ತದೆ ಎಂದರು.

ಪಟ್ಟಣದ ಎಆರ್‌ಟಿ ಕಚೇರಿ ಯಿಂದ ಪುರಭವನದವರೆಗೆ ಜಾಥ ನಡೆಸಲಾಯಿತು. ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್‌, ಸಾರಿಗೆ ಅಧಿಕಾರಿ ಅನಿಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್‌, ತಾಪಂ ಸದಸ್ಯ ಯಡೇ ಹಳ್ಳಿ ಮಂಜುನಾಥ್‌, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಉದಯ್‌ ಕುಮಾರ್‌, ತಾಪಂ ಸದಸ್ಯೆ ರುಕ್ಮಿಣಿ, ಸಮಾಜ ಸೇವಕ ಅರಸೀ ಕೆರೆಯ ಉಮಾಪತಿ ಮೊದಲಿಯಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next