Advertisement

Actor: ದರ್ಶನ್‌ಗೆ ಡಿಸ್ಕ್ ಸಮಸ್ಯೆ: ಚಿಕಿತ್ಸೆ ಅನಿವಾರ್ಯ

11:19 PM Oct 23, 2024 | Team Udayavani |

ಬಳ್ಳಾರಿ: ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಬೆನ್ನು ನೋವಿನ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ವರದಿ ಬುಧವಾರ ಜೈಲು ಅಧಿಕಾರಿಗಳಿಗೆ ವೈದ್ಯರು ತಲುಪಿಸಿದ್ದಾರೆ.

Advertisement

ದರ್ಶನ್‌ಗೆ ಇತ್ತೀಚೆಗೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ತಪಾಸಣೆ ಮಾಡಿ ನೀಡಿದ್ದ ವರದಿಯಂತೆ ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಎನ್‌. ಬಸಾರೆಡ್ಡಿ, ನ್ಯೂರೋ ಸರ್ಜನ್‌ ಡಾ| ವಿಶ್ವನಾಥ್‌ ಅವರ ನೇತೃತ್ವದಲ್ಲಿ ಮಂಗಳವಾರ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು.

ದರ್ಶನ್‌ಗೆ ಬೆನ್ನು ನೋವಿನ ಡಿಸ್ಕ್ (ಸಯಾಟಿಕ್‌) ಎಂಬ ಗಂಭೀರ ಸಮಸ್ಯೆಯಿದ್ದು, ಕೂಡಲೇ ಚಿಕಿತ್ಸೆಗೆ ಒಳಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ವರದಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ, ದರ್ಶನ್‌ ಜತೆ ಚರ್ಚಿಸಿ, ವರದಿ ಆಧರಿಸಿ ಸರ್ಜರಿ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಜೈಲು ಅಧಿ ಕಾರಿಗಳಿಗೆ ಮಂಗಳವಾರ ಹೈಕೋರ್ಟ್‌ ಆದೇಶಿಸಿತ್ತು. ಆದರೆ, ಈವರೆಗೆ ನಮಗೆ ಯಾವುದೇ ಲಿಖೀತ ರೂಪದಲ್ಲಿ ಆದೇಶ ಬಂದಿಲ್ಲ ಎಂದು ಜೈಲು ಅ ಧೀಕ್ಷಕಿ ಲತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next