Advertisement

ವಿವಾಹಿತ ಭಗ್ನ ಪ್ರೇಮಿಯಿಂದ ಯುವತಿ ಕಗ್ಗೊಲೆ; ಮಹಿಳೆಗೂ ಇರಿತ !

04:14 PM Apr 11, 2017 | Team Udayavani |

ಬೆಂಗಳೂರು: ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ವಿವಾಹಿತನೊಬ್ಬ ಇರಿದು ಹತ್ಯೆಗೈದಿದ್ದು, ತಡೆಯಲು ಬಂದ ಮಹಿಳೆಗೂ ಇರಿದ ಅಮಾನುಷ ಘಟನೆ ಮಂಗಳವಾರ ಮಧ್ಯಾಹ್ನ ಇಲ್ಲಿನ ದೀಪಾಂಜಲಿ ನಗರದಲ್ಲಿ ನಡೆದಿದೆ. 

Advertisement

ಪಾಗಲ್‌ ಪ್ರೇಮಿ ಗಿರೀಶ್‌ (35) ಎಂಬಾತ ಕೃತ್ಯ ಎಸಗಿದ್ದು, ಶೋಭಾ ಎಂಬ ಯುವತಿ ಹತ್ಯೆ ಗೀಡಾಗಿದ್ದು, ವಿಜಯಮ್ಮ ಎನ್ನುವ ಮಹಿಳೆ ಗಂಭೀರವಾಗಿ ಗಾಯಗೊಂಡವರು. 

ಗಿರೀಶ್‌ನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಶೋಭಾಳಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಂದು ಚೂರಿ ಸಮೇತ ಬಂದಿದ್ದ ಆತ ಪ್ರೀತಿಸುವಂತೆ ಪೀಡಿಸಿದ್ದು ನಿರಾಕರಿಸಿದಾಗ ಬಲವಾಗಿ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಈ ವೇಳೆ ನೆರಮನೆ ವಿಜಯಮ್ಮ ಬಂದು ತಡೆಯಲು ಮುಂದಾಗಿದ್ದು ಅವರಿಗೂ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. 

ಗಂಭೀರವಾಗಿ ರಕ್ತಸ್ರಾವಕ್ಕೊಳಗಾಗಿದ್ದ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೋಭಾ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ವಿಜಯಮ್ಮ ಸ್ಥಿತಿ ಚಿಂತಾಜನಕವಾಗಿದೆ. 

ಘಟನೆಯ ಬಳಿಕ ಗಿರೀಶ್‌ ತಲೆ ಮರೆಸಿಕೊಂಡಿದ್ದು,ಆತನಿಗಾಗಿ ಬ್ಯಾಟರಾಯನಪುರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Advertisement

ಗಿರೀಶ್‌ ಪೈಂಟರ್‌ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದ್ದು, 500 ಮೀಟರ್‌ ದೂರದಲ್ಲಿ ಶೋಭಾ ಅಣ್ಣನೊಂದಿಗೆ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next