Advertisement

ಪೆನ್ಶನ್ ಟೆನ್ಶನ್: ಪಿಂಚಣಿ ಹಣ ಸಿಗದೆ ಮನನೊಂದು ನಿವೃತ್ತ ಬಸ್ ಚಾಲಕನೋರ್ವ ಆತ್ಮಹತ್ಯೆ

03:26 PM Sep 02, 2020 | keerthan |

ಹಾವೇರಿ: ಪಿಂಚಣಿ ಹಣ ಸಿಗದಿದ್ದಕ್ಕಾಗಿ ನಿವೃತ್ತ ಬಸ್ ಚಾಲಕನೋರ್ವ  ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬುಧವಾರ ನಗರದ ಬಸ್ ಡಿಪೋ ಬಳಿ ನಡೆದಿದೆ.

Advertisement

ಶಿವಾನಂದಪ್ಪ ಹೂಗಾರ (62) ಎಂಬುವವರು ನಗರದ ಬಸ್ ಡಿಪೋ ಬಳಿಯ ಹೋಟೆಲೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಶಿವಾನಂದಪ್ಪ ಅವರು ಶಿಗ್ಗಾವಿ ಪಟ್ಟಣದ ನಿವಾಸಿಯಾಗಿದ್ದು ಕಳೆದ 1 ವರ್ಷ 8 ತಿಂಗಳಿನಿಂದ ಪಿಂಚಣಿ ಹಣಕ್ಕಾಗಿ ಅಲೆದಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ‌ ಹಾವೇರಿಯ ಕೇಂದ್ರ ಬಸ್ ನಿಲ್ದಾಣದ ಬಳಿ ಓಡಾಡುತ್ತಿದ್ದ ಶಿವಾನಂದಪ್ಪ ಅವರು ಮನನೊಂದು ಆತ್ಮಹತ್ಯೆ ಎನ್ನಲಾಗುತ್ತಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next