Advertisement

Election Commissioner ರಾಜೀನಾಮೆಗೆ ಭಿನ್ನಮತ ಕಾರಣ?: ವಿಪಕ್ಷ ಪ್ರಹಾರ

12:14 AM Mar 11, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಚುನಾವಣ ಆಯುಕ್ತ ಅರುಣ್‌ ಗೋಯಲ್‌ ರಾಜೀನಾಮೆ ನೀಡಿರುವುದಕ್ಕೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ರಾಜೀನಾಮೆಗೆ ಕಾರಣ ಸಿಇಸಿ ಜತೆಗಿನ ಭಿನ್ನಾಭಿಪ್ರಾಯವೋ, ಪ್ರಧಾನಿ ಮೋದಿ ಜತೆಗಿನ ಭಿನ್ನಾಭಿಪ್ರಾಯವೋ ಎಂದೂ ಪ್ರಶ್ನಿಸಿವೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿ ರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಈಗ ದೇಶದಲ್ಲಿ ಒಬ್ಬರೇ ಚುನಾವಣ ಆಯುಕ್ತರಿದ್ದಾರೆ. ಸಧ್ಯದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ನಾನು ಈ ಮೊದಲೇ ಹೇಳಿದಂತೆ ನಮ್ಮ ದೇಶದಲ್ಲಿನ ಸ್ವತಂತ್ರ ಸಂಸ್ಥೆಗಳನ್ನು ಕಾಪಾಡದಿದ್ದರೆ ದೇಶ ನಿರಂಕುಶ ಪ್ರಭುತ್ವಕ್ಕೆ ಒಳಗಾಗುತ್ತದೆ’ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕರಾದ ಉದ್ಧವ್‌ ಠಾಕ್ರೆ, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ, ಸಂಜಯ್‌ ರಾವತ್‌ ಸಹ ಗೋಯಲ್‌ ರಾಜೀನಾಮೆ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

35 ವರ್ಷಗಳಲ್ಲಿ 40 ಕಡೆ ಕೆಲಸ!: ಚುನಾವಣ ಆಯು ಕ್ತರಾಗಿ ಆಯ್ಕೆಯಾಗುವ ಮೊದಲು ಗೋಯಲ್‌ 35 ವರ್ಷಗಳಲ್ಲಿ 40 ಕಡೆ ನೇಮಕಗೊಂಡು ಕರ್ತವ್ಯ ನಿರ್ವಹಿಸಿದ್ದಾರೆ. 1987ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾ ಗಿರುವ ಗೋಯಲ್‌, ನಗರ ಪಾಲಿಕೆ, ಸಂಸ್ಕೃತಿ ಸಚಿವಾಲಯ, ಬೃಹತ್‌ ಕೈಗಾರಿಕೆ, ಹಣಕಾಸು, ನಗರಾಭಿವೃದ್ಧಿ ಸೇರಿದಂತೆ 40 ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

ರಾಜೀನಾಮೆಗೆ ಭಿನ್ನಮತ ಕಾರಣ?

Advertisement

ಗೋಯಲ್‌ ರಾಜೀನಾಮೆ ಸಲ್ಲಿಸಿರುವುದಕ್ಕೆ ವೈಯಕ್ತಿಕ ಕಾರಣಗಳನ್ನೂ ನೀಡಿದ್ದರೂ, ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ರೊಂದಿಗಿನ ಭಿನ್ನಾಭಿಪ್ರಾಯವೇ ಅವರ ರಾಜೀನಾಮೆಗೆ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಗೋಯಲ್‌ ಆರೋ ಗ್ಯವಾಗಿದ್ದರು. ಯಾವುದೇ ಕೌಟುಂಬಿಕ ಸಮಸ್ಯೆಯಿರಲಿಲ್ಲ ಎಂದು ಅವರ ಸ್ನೇಹಿತರು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾ.15ಕ್ಕೆ ಇಬ್ಬರು ಚುನಾವಣ ಆಯುಕ್ತರ ನೇಮಕ: ಮೂಲಗಳು

ಇಬ್ಬರು ಚುನಾವಣ ಆಯುಕ್ತರನ್ನು ಮಾ.15ರಂದು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರುಣ್‌ ಗೋಯಲ್‌ ರಾಜೀನಾಮೆ ನೀಡಿದ ಬಳಿಕ 2 ಚುನಾವಣ ಆಯುಕ್ತರ ಸ್ಥಾನ ಖಾಲಿಯಾಗಿದ್ದು, ಇವರ ನೇಮಕಾತಿಗಾಗಿ ಆಯ್ಕೆ ಸಮಿತಿ ಶೀಘ್ರವೇ ಸಭೆ ನಡೆಸಲಿದ್ದು, ಮಾ.15ರಂದು ನೇಮಕಾತಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗಬೇಕಿದ್ದು, ಮುಖ್ಯ ಚುನಾವಣ ಆಯುಕ್ತರು ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next