Advertisement

ಎಂ.ಆರ್‌ ಸಿನಿಮಾ ಮಾಡಿಯೇ ತೀರುತ್ತೇನೆ

02:28 PM Dec 23, 2020 | Suhan S |

ಇತ್ತೀಚೆಗಷ್ಟೇ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನದ ಕುರಿತು ಸಿನಿಮಾ ಮಾಡುವುದಾಗಿ ನಿರ್ದೇಶಕ ರವಿ ಶ್ರೀವತ್ಸ ಘೋಷಿಸಿದ್ದರು. ಅಷ್ಟೇ ಅಲ್ಲದೆ ಭರ್ಜರಿಯಾಗಿ ಚಿತ್ರದ ಪೋಟೋ ಶೂಟ್‌ಕೂಡ ಮಾಡಿ, ಮುಹೂರ್ತವನ್ನೂ ನೆರವೇರಿಸಿದ್ದರು.

Advertisement

ಇದಾದ ಕೆಲ ದಿನಗಳ ಬಳಿಕ ನಿರ್ಮಾಪಕ ಎಲ್‌. ಪದ್ಮನಾಭ, “ಈ ಹಿಂದೆಯೇ ಮುತ್ತಪ್ಪ ರೈ ಜೀವನದ ಬಗ್ಗೆ ಸಿನಿಮಾ ಮಾಡಲು ಯೋಜಿಸಿದ್ದೆವು. ಮುತ್ತಪ್ಪ ರೈ ಬದುಕಿದ್ದಾಗಲೇ ಈ ಬಗ್ಗೆ ಚರ್ಚೆ ನಡೆದಿತ್ತು. ಮುತ್ತಪ್ಪ ರೈ ಸಿನಿಮಾವನ್ನು ತಮ್ಮ ಬ್ಯಾನರ್‌ನಲ್ಲಿಯೇ ಮಾಡಲಿದ್ದು, ಬೇರೆ ಯಾರಿಗೂ ಈ ಸಿನಿಮಾ ಮಾಡಲು ಹಕ್ಕಿಲ್ಲ’ ಎಂದಿದ್ದರು.

ಇದನ್ನೂ ಓದಿ : ಶಶಾಂಕ್ ‌ಕಥೆಯಲ್ಲಿ ಅಜೇಯ್‌ ನಟನೆ

ಆದರೆ ಈ ಬಗ್ಗೆ ಈಗ ಪ್ರತಿಕ್ರಿಯಿಸಿರುವ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡಲು ಯಾರ ಅನುಮತಿಯೂ ಅಗತ್ಯವಿಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಯಾರೂ ಬೇಕಾದ್ರೂ, ಎಷ್ಟು ಬಾರಿ ಬೇಕಾದ್ರೂ ಸಿನಿಮಾ ಮಾಡಬಹುದು. ಹಾಗಾಗಿ, ಈಗಾಗಲೇ ಘೋಷಿಸಿರುವಂತೆ ತಾವು “ಎಂಆರ್‌’ ಚಿತ್ರ ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next