Advertisement

ನಿರ್ದೇಶಕ ಪ್ರೇಮ್‌ ವಿರುದ್ಧ ಶ್ರೀನಿವಾಸ್‌ ಗರಂ

11:24 AM Dec 14, 2018 | |

ಬೆಂಗಳೂರು: ನಿರ್ದೇಶಕ “ಜೋಗಿ’ ಪ್ರೇಮ್‌ ಅವರ ವಿರುದ್ಧ  ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಂಚನೆ ಆರೋಪ ಮಾಡಿದ್ದಾರೆ. “ಜೋಗಿ’ ಚಿತ್ರದ ಬಳಿಕ, ಶ್ರೀನಿವಾಸ್‌ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಲು ಪ್ರೇಮ್‌ ಒಪ್ಪಿಕೊಂಡಿದ್ದು, ಇದಕ್ಕಾಗಿ ಮುಂಗಡವಾಗಿ 10 ಲಕ್ಷ ರೂ.ಅಡ್ವಾನ್ಸ್‌ ಪಡೆದಿದ್ದರು.

Advertisement

ಆದರೆ ಪ್ರೇಮ್‌ ನಂತರ ಆ ಚಿತ್ರವನ್ನು ಮಾಡಲಿಲ್ಲ. ಹೀಗಾಗಿ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ 2 ಲಕ್ಷ ರೂ. ಮಾತ್ರ ನೀಡಿ ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆಂದು ಶ್ರೀನಿವಾಸ್‌ ಆರೋಪಿಸಿದ್ದಾರೆ.

ಇಲ್ಲಿಯವರೆಗೆ ಹಲವು ಬಾರಿ ತಿಳಿಸಿದ್ದರೂ, ಪ್ರೇಮ್‌ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ. ಹಾಗಾಗಿ ಪ್ರೇಮ್‌ ಅವರಿಂದ ಬಾಕಿ ಹಣ ಬರುವವರೆಗೂ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕನಕಪುರ ಶ್ರೀನಿವಾಸ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next