Advertisement

Kannada Cinema; ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್‌

11:06 AM Dec 03, 2023 | Team Udayavani |

ದಿನಕರ್‌ ತೂಗುದೀಪ ಅವರು ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದಿರುವುದು ನಿಮಗೆ ಗೊತ್ತೇ ಇದೆ. “ಸಾರಥಿ’, “ನವಗ್ರಹ’, “ಜೊತೆ ಜೊತೆಯಲಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಂಡಿರುವ ದಿನಕರ್‌ಗೆ ಈಗ ನಟರಾಗಿಯೂ ಬೇಡಿಕೆ ಇದೆ. ಹಾಗೆ ನೋಡಿದರೆ ನಟನೆಯಲ್ಲಿ ಮಿಂಚಿ, ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡಿರುವುದು ಅವರ ಸಹೋದರ ದರ್ಶನ್‌. ಈಗ ದಿನಕರ್‌ ಕೂಡಾ ನಟನೆಯತ್ತ ವಾಲುತ್ತಿದ್ದಾರೆ. ಅದರಲ್ಲೂ ಹಳೆಯ ಡಾನ್‌ ಗೆಟಪ್‌ನಲ್ಲಿ ಅವರ ತಂದೆಯನ್ನೇ ಹೋಲುತ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಝಿಯಾಗುವ ಲಕ್ಷಣ ಕಾಣುತ್ತಿದೆ.

Advertisement

ಸದ್ಯ ದಿನಕರ್‌ “ಕೈವ’ ಸಿನಿಮಾದಲ್ಲಿ ನಟಿಸಿದ್ದು, ಅವರ ಲುಕ್‌ ಬಿಡುಗಡೆಯಾಗಿದೆ. ಅವರ ಹೊಸ ಗೆಟಪ್‌ ನೋಡಿದವರು ಫಿದಾ ಆಗಿದ್ದಾರೆ. “ನಿಮ್ಮ ತಂದೆಯನ್ನೇ ನೋಡಿದಂತಾಗುತ್ತಿದೆ’ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದು ದಿನಕರ್‌ಗೆ ಖುಷಿ ಕೊಟ್ಟಿದೆ.

“ಅಪ್ಪನ ಲುಕ್‌ ನನಗೆ ಬಂದರೆ, ನಟನೆ ದರ್ಶನ್‌ಗೆ ಬಂದಿದೆ. ಇವತ್ತು ನಾನು ನಟಿಸಲು ಕಾರಣ “ಕೈವ’ ಸಿನಿಮಾದ ನಿರ್ದೇಶಕ ಜಯತೀರ್ಥ ಅವರು. ಅವರು ಹೇಳಿದ್ದನ್ನಷ್ಟೇ ಮಾಡಿದ್ದೀನಿ. ಎಲ್ಲಾ ಕ್ರೆಡಿಟ್‌ ಅವರಿಗೆ ಸಲ್ಲಬೇಕು’ ಎನ್ನುತ್ತಾರೆ ದಿನಕರ್‌.

ಸದ್ಯ ದಿನಕರ್‌ “ರಾಯಲ್‌’ ಎಂಬ ಸಿನಿಮಾವನ್ನು ನಿರ್ದೇಶಿಸಿ ದ್ದಾರೆ. ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರ ಸಿನಿಮಾ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿತ್ತು. ಆದರೆ, ಪುನೀತ್‌ ನಿಧನದ ನಂತರ ಆ ಪ್ರಾಜೆಕ್ಟ್ ಡ್ರಾಪ್‌ ಆಗಿತ್ತು. ಈಗ “ಕಿಸ್‌’ ಹೀರೋ ವಿರಾಟ್‌ ನಾಯಕರಾಗಿರುವ “ರಾಯಲ್‌’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next