Advertisement

ಜಾಧವ್‌ಗೆ ರಾಜತಾಂತ್ರಿಕ ನೆರವು: ಪಾಕ್‌ ನಕಾರ

12:41 AM Aug 09, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತೀಯ ಕುಲಭೂಷಣ್‌ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದರೂ ಪಾಕಿಸ್ಥಾನ ಸಮ್ಮತಿಸುತ್ತಿಲ್ಲ. ಕಣ್ಗಾವಲಿ ನಿಂದ ಮುಕ್ತವಾದ ರಾಜತಾಂತ್ರಿಕ ಸಂಪರ್ಕ ಒದಗಿಸಬೇಕು ಎಂದು ಭಾರತ ಆಗ್ರಹಿಸಿದ್ದು, ಇದಕ್ಕೆ ಪಾಕಿಸ್ಥಾನ ನಿರಾಕರಿಸಿದೆ. ಅಲ್ಲದೆ ಜಾಧವ್‌ರನ್ನು ರಾಜತಾಂತ್ರಿಕ ಅಧಿಕಾರಿ ಭೇಟಿ ನೀಡುವಾಗ ಒಟ್ಟು ಪ್ರಕ್ರಿಯೆಯನ್ನು ರೆಕಾರ್ಡ್‌ ಮಾಡಬೇಕು ಎಂಬ ಷರತ್ತನ್ನು ಮುಂದಿಟ್ಟಿದೆ. ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವ ಕುರಿತ ಮಾತುಕತೆ ಸದ್ಯಕ್ಕೆ ಮುಗಿದಿದೆ ಎಂದು ಪಾಕಿಸ್ಥಾನದ ಮೂಲಗಳು ತಿಳಿಸಿವೆ. ಪಾಕಿಸ್ಥಾನ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂ ಸಿದೆ ಎಂದು ಕಳೆದ ಜುಲೈ 17ರಂದು ಅಂತಾರಾಷ್ಟ್ರೀಯ ನ್ಯಾಯಾಲಯ ಟೀಕಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next