Advertisement

ಗೃಹ ರಕ್ಷಕ ದಳದ ಸೆಕ್ಷನ್‌ ಲೀಡರ್‌ ದಿನೇಶ್‌ಗೆ ಕಂಚಿನ ಪದಕ ಪ್ರದಾನ

11:39 PM Dec 07, 2022 | Team Udayavani |

ಉಪ್ಪಿನಂಗಡಿ: ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಕಾರ್ಯದಕ್ಷತೆ ಮೆರೆದ ಕಾರಣಕ್ಕೆ ಉಪ್ಪಿನಂಗಡಿಯ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಹಾಗೂ ಸೆಕ್ಷನ್‌ ಲೀಡರ್‌ ಆಗಿರುವ ದಿನೇಶ್‌ ಬಿ. ಅವರಿಗೆ ಕೇಂದ್ರದ ಗೃಹ ಸಚಿವಾಲಯ ಕೊಡಮಾಡಿದ ಕಂಚಿನ ಪದಕ ಹಾಗೂ ಪ್ರಶಂಸನೀಯ ಪತ್ರವನ್ನು ಮಂಗಳವಾರ ಪ್ರದಾನ ಮಾಡಲಾಯಿತು.

Advertisement

ಬೆಂಗಳೂರಿನ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ಗೃಹ ರಕ್ಷಕ ದಳದ ಮಹಾ ಸಮಾದೇಷ್ಠ ಅಮರ್‌ ಕುಮಾರ್‌ ಪಾಂಡೆ (ಐಪಿಎಸ್‌) ಪದಕ ಹಾಗೂ ಪ್ರಶಂಸನೀಯ ಪತ್ರವನ್ನು ಪ್ರದಾನ ಮಾಡಿದರು.

ಇದನ್ನೂ ಓದಿ: ಕೃಷಿ ಸಾಲ ಮಂಜೂರಾತಿಗೆ ಲಂಚ: ಬ್ಯಾಂಕ್‌ ಮ್ಯಾನೇಜರ್‌ಗೆ ಜೈಲು ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next