Advertisement

“ದಿನೇಶ್‌ಗೆ ಕಾನೂನು ಅರಿವಿನ ಕೊರತೆ

01:49 AM Jan 20, 2020 | Team Udayavani |

ಉಡುಪಿ: ಸಿಎಎ ವಿಚಾರದಲ್ಲಿ ದಿನೇಶ್‌ ಗುಂಡೂರಾವ್‌ ಅವರಿಗೆ ಕಾನೂನಿನ ಅರಿವಿನ ಕೊರತೆಯಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದರು.

Advertisement

ಉಡುಪಿಗೆ ರವಿವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸಿಎಎ ವಿಚಾರದಲ್ಲಿ ಗುಂಡೂರಾವ್‌ ಹೇಳಿಕೆ ಬಾಲಿಶತನದಿಂದ ಕೂಡಿದೆ, ಅವರಿಗೆ ಕಾನೂನಿನ ಆಳವಾದ ಅಧ್ಯಯನವಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಜನರಲ್ಲಿರುವ ಗೊಂದಲವನ್ನು ನಾವು ನಿವಾರಿಸುತ್ತೇವೆ. ದೇಶದ 130 ಕೋಟಿ ಜನರಿಗೆ ಕಾಯ್ದೆಯಿಂದ ತೊಂದರೆ ಆಗುವುದಿಲ್ಲ ಎಂದು ಡಿ.ವಿ. ಹೇಳಿದರು. ಕಾಂಗ್ರೆಸ್‌ನವರಿಗೆ ಐದೂವರೆ ವರ್ಷ ಬಿಜೆಪಿ ಸರಕಾರವನ್ನು ವಿರೋ ಧಿಸಲು ಏನೂ ವಿಷಯ ಸಿಕ್ಕಿಲ್ಲ. ಅದಕ್ಕೀಗ ಸಿಎಎ ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್‌ ಒಳಜಗಳದಿಂದ ವಿಭಜನೆಗೊಳ್ಳುತ್ತಿದೆ. ಅದನ್ನು ನಿಲ್ಲಿಸಲಿ, ಬಳಿಕ ದೇಶ ಒಡೆಯುವ ಹೇಳಿಕೆ ನೀಡಲಿ ಎಂದರು.

ಸಚಿವ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರ ಜತೆ ಈ ವಿಚಾರವಾಗಿ ಚರ್ಚಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next