Advertisement

ಜಾತ್ಯಾತೀತ ನಿಲುವಿಗೆ ಪೂರಕವಾಗಿ ತೀರ್ಪು ಬಂದಿದೆ: ದಿನೇಶ್ ಗುಂಡೂರಾವ್

01:55 PM Nov 09, 2019 | keerthan |

ಬೆಂಗಳೂರು: ಇಂದು ಪ್ರಕಟವಾದ ಅಯೋಧ್ಯೆ ತೀರ್ಪು ನಮ್ಮ ದೇಶದ ಐಕ್ಯತೆಗೆ ಈ ಸಾಕ್ಷಿಯಾಗಿದೆ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನಿಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಮೂಲ ಸೈದ್ಧಾಂತಿಕ ನಿಲುವಿಗೆ ಅವಕಾಶ ಸಿಕ್ಕಿದೆ. ನಾವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನ ಗೌರವಿಸಿದ್ದೇವೆ. ದಶಕಗಳಿಂದ ಇದು ವಿವಾದಕ್ಕೊಳಗಾಗಿತ್ತು. ಇದಕ್ಕೆ ಇದೀಗ ಅಂತ್ಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ತೀರ್ಪನ್ನ ಗೌರವಯುತವಾಗಿ ನಾವು ಒಪ್ಪಿಕೊಳ್ತೇವೆ ಎಂದ ಅವರು, ದೇಶದ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next