Advertisement

ದುಡಿದ ಅನ್ನವನ್ನು ಬೇಯಿಸಿ ತಿನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ: ದಿನೇಶ್ ಗುಂಡೂರಾವ್

05:00 PM Oct 07, 2021 | Team Udayavani |

ಬೆಂಗಳೂರು: ಎಲ್ ಪಿಜಿ ದರ ಮತ್ತೆ 15 ರೂ ಹೆಚ್ಚಳವಾಗಿ ಸಾರ್ವತ್ರಿಕ ಏರಿಕೆ ಕಂಡಿದೆ. ಇಂತಹ ದುಬಾರಿ ದುನಿಯಾದಲ್ಲಿ ಮೋದಿಯವರ ಶ್ರೀಮಂತ ಸ್ನೇಹಿತರು,’ಕೋಟಿ ರವಿ’ ಎಂಬ ಬಿರುದಾಂಕಿತರು ಮಾತ್ರ ಜೀವನ ನಡೆಸಬಹುದಷ್ಟೆ. ಆದರೆ ಜನಸಾಮಾನ್ಯ, ದುಡಿದ ಅನ್ನವನ್ನು ಬೇಯಿಸಿ ತಿನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಇದೆಂತಹ ಒಳ್ಳೆಯ ದಿನಗಳು ಬಿಜೆಪಿ ನಾಯಕರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯುಪಿಎ ಸರ್ಕಾರವಿದ್ದಾಗ ಬಡವರ ಎಲ್ ಪಿಜಿ ಗೆ ಸಬ್ಸಿಡಿಯಾದರೂ ಸಿಗುತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಆ ಸಬ್ಸಿಡಿಯನ್ನು ಕೂಡ ರದ್ದು ಮಾಡಿದೆ. ಈಗ ಪ್ರತಿ ಸಿಲಿಂಡರ್‌‌ಗೆ 1024 ಕೋಟಿ ರೂ. ಆದಾಯವಿರುವ ಅದಾನಿ ಕೂಡ 902 ರೂ. ಕೊಡಬೇಕು, ಮೈಮುರಿದು ದುಡಿದರೂ ನೂರು ರೂಪಾಯಿ ಗಳಿಸಲಾಗದ ಬಡವ ಕೂಡ 902 ರೂ. ಕೊಡಬೇಕು. ಬಡವ ಅದಾನಿಯಂತೆ ಬದುಕಲು ಸಾಧ್ಯವೇ? ಎಂದಿದ್ದಾರೆ.

ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿ ಬಿಡುಗಡೆ: ಮನೇಕಾ, ವರುಣ್ ಗಾಂಧಿಗೆ ಕೊಕ್

ಕೋಟಿ ಕುಳಗಳೆ ತುಂಬಿರುವ ಬಿಜೆಪಿಯವರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಬಹುದು. ಆದರೆ ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವವನಿಗೆ ಬೆಲೆಯೇರಿಕೆಯ ಕಷ್ಟ ಏನೆಂದು ಗೊತ್ತಿದೆ. ಈ ಸರ್ಕಾರದ ಹಣದಾಹಕ್ಕೆ ಈಗಾಗಲೇ ಬಡವನ ಬದುಕು ನಾಶವಾಗಿ ಹೋಗಿದೆ. ಈ ಸರ್ಕಾರಕ್ಕೆ ಕಾರ್ಪೊರೇಟ್ ಧಣಿಗಳ ಮೇಲಿರುವ ಪ್ರೀತಿ, ಅನುಕಂಪ ಹಾಗೂ ಮಮತೆ ಬಡವರ ಮೇಲೆ ಯಾಕಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next