Advertisement

Horoscope: ಅವಿವಾಹಿತ ಹುಡುಗರಿಗೆ ವಿವಾಹ ಯೋಗ ಒದಗಿಬರಲಿದೆ

07:58 AM Nov 26, 2023 | Suhan S |

ಮೇಷ: ಎಣಿಸಿದ್ದು ಕೈಗೂಡಲಿಲ್ಲ ಎಂಬ ಚಿಂತೆ ಬೇಡ,  ದೇವರು ಇನ್ನೊಂದು ಕೊಡುತ್ತಾನೆ ಎಂಬ ಭರವಸೆ ಇರಲಿ. ವಿರಾಮದ ದಿನವಾದರೂ ಕೆಲಸದ ಚಿಂತೆ. ಉದ್ಯಮ,  ವ್ಯವಹಾರದಲ್ಲಿ  ಉತ್ತಮ ಲಾಭ. ಲೇವಾದೇವಿ ವ್ಯವಹಾರ ನಿಮಗೆ  ಹಿಡಿಸದು.  ಅಪರೂಪದ ನೆಂಟರ ಆಗಮನ.

Advertisement

ವೃಷಭ: ಕಾಲ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ.  ವಿರಾಮದಲ್ಲಿ ಗೆಳೆಯರ ಭೇಟಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ   ದಿಢೀರ್‌ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ  ನೌಕರಿ  ಸಿಗುವ ಸೂಚನೆ.  ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಕೃಷ್ಯುತ್ಪಾದನೆ ಮಾರಾಟದಿಂದ ಉತ್ತಮ ಲಾಭ.

ಮಿಥುನ: ಭಗವಂತನೇ ಭವಿಷ್ಯ ನಿರ್ಣಾಯಕ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ.  ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಸಫ‌ಲವಾಗುವ ಸೂಚನೆ.  ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ  ಪ್ರೀತಿ, ಸಾಮರಸ್ಯ ವೃದ್ಧಿ.

ಕರ್ಕಾಟಕ: ಮಲಿನ ಪರಿಸರದಿಂದ ಪ್ರಭಾವಿತರಾಗಬೇಡಿ. ಸತತ ಪ್ರಯತ್ನದಿಂದ ಸದ್ಭಾವನೆ. ಸ್ವಂತ ಉದ್ಯಮವನ್ನು ದೀರ್ಘ‌ಕಾಲದಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ದೇವತಾರಾಧನೆ, ಸದ್ಗ್ರಂಥ ಪಾರಾಯಣ, ಧ್ಯಾನ, ಭಜನೆ, ಸತ್ಸಂಗಗಳತ್ತ ಸೆಳೆತ.

ಸಿಂಹ: ಆರು ದಿನಗಳ ಸತತ ಶ್ರಮದ ಬಳಿಕ ವಿರಾಮದಲ್ಲೂ ಕ್ರಿಯೆಯ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ. ಹಿರಿಯರ ಆರೋಗ್ಯ ಉತ್ತಮ.

Advertisement

ಕನ್ಯಾ: ಹೊಸ ಬಗೆಯ ಅನು ಭವಗಳಿಂದಲೇ ಬದುಕಿಗೆ ರುಚಿ. ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್ಸ್ ರಿಪೇರಿಯವರಿಗೆ ವಿರಾಮ ಇಲ್ಲ. ವಯಸ್ಸು ಮೀರುವ ಭೀತಿಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ.  ವೃತ್ತಿ ಪರಿಣತಿ ವೃದ್ಧಿಗೆ ನುರಿತವರ ಸಹಾಯ.

ತುಲಾ: ಚಿತ್ತಸ್ಥೈರ್ಯ ಪ್ರಾಪ್ತಿಯ ಪ್ರಯತ್ನದಲ್ಲಿ  ಮುನ್ನಡೆ.  ಬಾಲ್ಯದ ಒಡನಾಡಿಗಳ ಅಕಸ್ಮಾತ್‌ ಮಿಲನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ಆಧ್ಯಾತ್ಮಿಕ ಸಾಹಿತ್ಯ ಅಧ್ಯಯನ. ಮನೆಗೆ ಬಂದ ಹಿರಿಯರೊಂದಿಗೆ ಹತ್ತಿರದ ದೇವಾಲಯಕ್ಕೆ ಸಂದರ್ಶನ.

ವೃಶ್ಚಿಕ: ವಿರಾಮದ ದಿನ ಕೆಲಸದ ಚಿಂತೆಯನ್ನು ದೂರವಿಡಿ. ಬಂಧು ಮಿತ್ರರ ಭೇಟಿ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ  ಸುಧಾರಣೆ. ಹಳೆಯ  ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ.  ಉದ್ಯೋಗ ಅರಸುವ ಶಿಕ್ಷಿತರಿಗೆ ಶುಭ ಸೂಚನೆ.

ಧನು: ಸೇವಾಸ್ಥಾನದಲ್ಲಿ ನಿಮ್ಮಿಂದ ಉಪಕೃತ ರಾದವರ ಆಗಮನ.  ಸಣ್ಣ ಪ್ರಮಾಣದ ಗೃಹೋದ್ಯಮ ಕೈಗೊಳ್ಳಲು ಸಿದ್ಧತೆ. ಸ್ವಂತ ಮನೆ ಹೊಂದುವ ಹಂಬಲ  ಈಡೇರುವ ಸೂಚನೆ. ಮನೆಯಲ್ಲಿ ಇಷ್ಟದೇವತಾರ್ಚನೆ. ಸೋದರ, ಸೋದರಿಯರ ಭೇಟಿ. ಕೃಷಿ ಕ್ಷೇತ್ರಕ್ಕೆ ಭೇಟಿ.

ಮಕರ: ವಿರಾಮದ ದಿನ ವಾದರೂ  ಹಲವು ಬಗೆಯ ಕರ್ತವ್ಯಗಳಿಂದಾಗಿ ದೈಹಿಕ ವಿಶ್ರಾಂತಿಯ ಪ್ರಶ್ನೆ ಇಲ್ಲ. ನಿಕಟ ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅರ್ಧ ದಿನದ ವ್ಯಾಪಾರದಲ್ಲೇ ನಿರೀಕ್ಷೆ ಮೀರಿದ ಲಾಭ.

ಕುಂಭ: ವಿರಾಮದ  ದಿನ ಸೇವೆಗೆ ಮೀಸಲಾಗಿಡುವ ಮನಸ್ಸಿದ್ದರೂ  ಕಾರ್ಯ ರಂಗದ ಕರೆಗೆ ಸ್ಪಂದನ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಅತಿಯಾದ ಬೇಡಿಕೆ.

ಮೀನ: ವಿರಾಮದ ದಿನ ಬಂದ ಸಹಾಯದ ಕರೆಗಳಿಂದ ವಿಚಲಿತರಾಗದಿರಿ.ಒಡನಾಡಿಗಳಿಂದ ಸರ್ವವಿಧ ಸಹಾಯ. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದುವರಿಕೆ. ನಿಕಟಬಂಧುವಿಗೆ ನಿರ್ಮಾಣ ವ್ಯವಹಾರ  ಮುಂದುವರಿಸಲು ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next