Advertisement

ಡಿಂಪಲ್‌ ಕ್ವೀನ್‌ ರಚಿತಾ

10:01 AM Feb 03, 2020 | Team Udayavani |

ನಟ ಕಂ ರಾಜಕಾರಣಿ ನಿಖೀಲ್‌ ಕುಮಾರಸ್ವಾಮಿ ಜೊತೆ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ನಂತರ ನಿಖೀಲ್‌ ಕುಮಾರ್‌ ಮತ್ತು ರಚಿತಾ ರಾಮ್‌ ನಡುವಿನ ಸ್ನೇಹ ಹಲವರ ಅನುಮಾನಕ್ಕೆ ಕಾರಣವಾಗಿತ್ತು.

Advertisement

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಮೊದಲಾದ ಖಾಸಗಿ ವಿಚಾರಗಳ ಬಗ್ಗೆ ಜನ ಸಾಮಾನ್ಯರ ಮಧ್ಯೆ ಒಂದಷ್ಟು ಚರ್ಚೆಗಳು ಆಗುತ್ತಲೇ ಇರುತ್ತದೆ. ಅದರಲ್ಲೂ ಸಿನಿಮಾ ತಾರೆಯರು ಅಂದ್ರೆ ಕೇಳಬೇಕಾ? ಇನ್ನೂ ಕೊಂಚ ಹೆಚ್ಚಾಗಿಯೇ ಸಿನಿಮಾ ಮಂದಿಯ ಬಗ್ಗೆ ಅಂತೆ-ಕಂತೆ ಮಾತುಗಳು ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ಈ ಮಾತುಗಳು ತಾರೆಯರಿಗೆ ತೀರಾ ರಿಕಿರಿಯನ್ನುಂಟುಮಾಡುತ್ತವೆ. ಈಗ ಸ್ಯಾಂಡಲ್‌ವುಟ್‌ ನಟಿ ರಚಿತಾ ರಾಮ್‌ಗೂ ಹೋದಲ್ಲಿ, ಬಂದಲ್ಲಿ ಇಂಥದ್ದೇ ಅನುಭವವಾಗುತ್ತಿದೆಯಂತೆ.

ಹೌದು, ನಟ ಕಂ ರಾಜಕಾರಣಿ ನಿಖೀಲ್‌ ಕುಮಾರಸ್ವಾಮಿ ಜೊತೆ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ನಂತರ ನಿಖೀಲ್‌ ಕುಮಾರ್‌ ಮತ್ತು ರಚಿತಾ ರಾಮ್‌ ನಡುವಿನ ಸ್ನೇಹ ಹಲವರ ಅನುಮಾನಕ್ಕೆ ಕಾರಣವಾಗಿತ್ತು. ನಿಖೀಲ್‌ ಕುಮಾರ್‌ ಮತ್ತು ರಚಿತಾರಾಮ್‌ ಹೊರಗಡೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದದ್ದು, ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಚಿತ್ರರಂಗದಲ್ಲಿ ಮತ್ತು ಸಿನಿಪ್ರಿಯರಲ್ಲಿ ಹರಿದಾಡುವಂತೆ ಮಾಡಿತ್ತು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದರ ಬಗ್ಗೆ ಕಾಮೆಂಟ್ಸ್‌ ಮಾಡಲು ಶುರುಮಾಡಿದ್ದರು. ಅಲ್ಲದೆ ಎಲ್ಲೇ ಹೋದ್ರೂ, ಜನರು ಮತ್ತು ಮಾಧ್ಯಮಗಳು ಕೂಡ ರಚಿತಾ ಹತ್ತಿರ ಮದುವೆ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಹೀಗೆ ತಮ್ಮ ಮದುವೆ ಬಗ್ಗೆ ಹೋದಲ್ಲಿ, ಬಂದಲ್ಲಿ ಕೇಳಿಬರುತ್ತಿದ್ದ ಪ್ರಶ್ನೆಗಳ ಬಗ್ಗೆ ಇದೀಗ ರಚಿತಾ ರಾಮ್‌ ಒಂದಷ್ಟು ಸ್ಪಷ್ಟನೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದ ತಮ್ಮ ಮದುವೆ ಊಹಾಪೋಹಗಳಿಗೆ ರಚಿತಾ ರಾಮ್‌ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

“”ಈ ನಡುವೆ ಫೇಸ್‌ಬುಕ್‌, ಇನ್ಸ್ಟಾ ಗ್ರಾಮ್, ಟ್ವೀಟ್ಟರ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ಕೊಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ. ಮನರಂಜನೆಗಾಗಿ ಸುಳ್ಳು ವದಂತಿಗಳಗಳನ್ನು ಸೃಷ್ಟಿ ಮಾಡಿದರೆ ಖುಷಿ ಉಂಟಾಗಬಹುದು. ಆದರೆ, ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ” ಎಂದು ಅಭಿಮಾನಿಗಳಿಗೆ ಕೋರಿಕೊಂಡಿದ್ದಾರೆ.

Advertisement

ಅಲ್ಲದೆ ತಮ್ಮ ಮದುವೆಯ ಬಗ್ಗೆ ಪ್ರಸ್ತಾಪಿಸಿರುವ ರಚಿತಾ ರಾಮ್‌, “ಅತಿ ಮುಖ್ಯವಾದ ಸಂಗತಿ ಏನೆಂದರೆ, ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ. ನಾನು ಮದುವೆಯಾಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ’ ಎಂದು ಸೋಶಿಯಲ್‌ ಮೀಡಿಯಾಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮತ್ತೂಂದೆಡೆ ನಿಖೀಲ್‌ ಕುಮಾರ್‌ ಅವರ ನಿಶ್ಚಿತಾರ್ಥದ ಸುದ್ದಿಯೂ ಹೊರಬಿದ್ದಿದ್ದು, ಕಳೆದ ಕೆಲ ತಿಂಗಳಿನಿಂದ ರಚಿತಾ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗ್ಳಿಗೆ ಇನ್ನಾದರೂ ತೆರೆ ಬೀಳುತ್ತದೆಯಾ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next