Advertisement

Vijayapura ಬಿಜೆಪಿಗೆ ಸಂಕಷ್ಟ: ಬಂಡಾಯ ಸ್ಪರ್ಧೆಗೆ ಸಜ್ಜಾದ ನಾಯಿಕ

11:29 PM Mar 16, 2024 | Shreeram Nayak |

ವಿಜಯಪುರ: ಶಿವಮೊಗ್ಗ, ತುಮಕೂರು, ಬೆಳಗಾವಿ ಬೆನ್ನಲ್ಲೇ ವಿಜಯಪುರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಘೋಷಿತ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಬಿಜೆಪಿ ಟಿಕೆಟ್‌ ವಂಚಿತ ಡಾ|ಬಾಬುರಾಜೇಂದ್ರ ನಾಯಿಕ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಬಂಡಾಯ ಸ್ಪರ್ಧೆಯ ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ವರಿಷ್ಠರೇ ಅಭ್ಯರ್ಥಿಯನ್ನು ಬದಲಿಸಬೇಕಷ್ಟೇ ಎಂದು ಪಟ್ಟು ಹಿಡಿದಿದ್ದಾರೆ.

Advertisement

ಬಿಜೆಪಿ ಮುಖಂಡರು ಟಿಕೆಟ್‌ ನೀಡುವ ಭರವಸೆ ನೀಡಿದ್ದರು. ಆದರೆ ರಮೇಶ ಜಿಗಜಿಣಗಿ ಪಕ್ಷ ಬಿಡುವ ಬ್ಲ್ಯಾಕ್‌ ಮೇಲ್ ಮಾಡಿ ಟಿಕೆಟ್‌ ತಂದಿದ್ದಾರೆ. ಬಿಜೆಪಿ ಟಿಕೆಟ್‌ ವಂಚಿತನಾಗಿರುವ ನಾನು ಬಂಡಾಯವಾಗಿ ಸ್ಪರ್ಧೆಗೆ ಇಳಿಯುವುದು ಖಚಿತ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯಲ್ಲ. ಬದಲಾವಣೆ ಆಗಲೇಬೇಕಿದ್ದರೆ ಪಕ್ಷದ ವರಿಷ್ಠರು ಕೂಡಲೇ ಘೋಷಿತ ಅಸಮರ್ಥ ಅಭ್ಯರ್ಥಿ ಬದಲಿಸಲಿ. ಇಲ್ಲವೇ ಜಿಗಜಿಣಗಿ ಹೊರತಾಗಿ ಪರ್ಯಾಯ ಸಮರ್ಥ ವ್ಯಕ್ತಿಯನ್ನು ಘೋಷಿಸಿದರೆ ಒಪ್ಪಿಕೊಳ್ಳುತ್ತೇನೆ. ಇದರ ಹೊರತಾಗಿ ನನ್ನ ನಿಲುವು, ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next