Advertisement
ಎರ್ಮಾಳಿನ ಹಿದಾಯತ್ ಕುಟುಂಬವು ನಮ್ಮೂರ ಬೀಚ್ ನೋಡಬನ್ನಿ ಎಂದು ತಮ್ಮೆಲ್ಲಾ ಸಹೋದರ, ಸಹೋದರಿಯರನ್ನು ಅಹ್ವಾನಿಸಿದ್ದರು. ಹಾಗಾಗಿ ಕುಂದಾಪುರ ಹೆಮ್ಮಾಡಿಯ ನಂದ್ಯಪ್ಪ ಶೆಟ್ಟಿ, ಶಾರದಾ ಹಟ್ಟಿಯಂಗಡಿ, ಭಾಗ್ಯವತಿ ಮರವಂತೆ, ಶಶಿಧರ ಪೂಜಾರಿ ಕಲ್ಲಮುಂಡ್ಕೂರು, ವಿದ್ಯಾ ಶೆಟ್ಟಿ ಅಡ್ವೆ, ಉಮೇಶ ಶೆಟ್ಟಿ ಕಾರ್ಕಳ ಸೇರಿದಂತೆ ಸುಮಾರು 20ಮಂದಿ ಪಡುಬಿದ್ರಿ ಬೀಚ್ನ ಗಾಳಿಗೋಪುರಕ್ಕೆ ಆಗಮಿಸಿ ಸಂಭ್ರಮಿಸಿದರು.
ಇಂದಿಲ್ಲಿ ಆಗಮಿಸಿದ್ದ ವಿದ್ಯಾ ಶೆಟ್ಟಿ ದೂರದ ಮುಂಬಯಿನಲ್ಲಿ ಫಿಲ್ಮ್ ಶೂಟಿಂಗ್ ವೇಳೆ ಬಿದ್ದು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಈಗ ಅತ್ತಿತ್ತ ಓಡಾಡಲು ವೀಲ್ ಚಯರನ್ನೇ ಸದ್ಯ ನೆಚ್ಚಿಕೊಂಡಿದ್ದಾರೆ. ಶಶಿಧರ್ ಪೂಜಾರಿ ಅವರು ಲಿಪ್ಟ್ನಿಂದ ಬಿದ್ದು ಬೆನ್ನು ಹುರಿಯ ತೊಂದರೆಗೊಳಗಾಗಿ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಶಾರದಾ ಅವರ ಕಾಲಲ್ಲಿ ಬಲವಿಲ್ಲ. ತೆವಳುತ್ತಲೇ ಸಾಗಬೇಕಾದ ಅನಿವಾರ್ಯತೆಯಿದೆ. ಸಂಕಷ್ಟಕ್ಕೆ ನಾವು ಒಳಗಾಗಿದ್ದರೂ ತಮ್ಮಲ್ಲಿ ಜೀವನೋತ್ಸಾಹವು ಕುಗ್ಗಿಲ್ಲ. ತಮ್ಮಲ್ಲಿ ಕೆಲವರಿಗೆ ಅನುಕಂಪದೊಂದಿಗೆ ರುಡ್ಸೆಟ್ನಲ್ಲಿ ವಾರದ ತರಬೇತಿ ಸಹಿತ ತ್ರಿಚಕ್ರ ವಾಹನಗಳನ್ನು ನೀಡಲಾಗಿದೆ. ಆದರೆ ತಾವು ಬಳಸುವ ಪೆಟ್ರೋಲ್ಗೂ ಜಿಲ್ಲೆಯಲ್ಲಿ ಮೀನುಗಾರರ ಬೋಟ್ಗಳಿಗೆ ನೀಡುವ ಡೀಸೆಲ್ ಸಬ್ಸಿಡಿಯಂತೆ ಸಬ್ಸಿಡಿ ನೀಡಬೇಕೆಂಬ ಮನವಿಯನ್ನು ಇವರು ಮಾಡಿಕೊಂಡಿದ್ದಾರೆ.
Related Articles
ತಮಗೆ ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಒಳಗೆ ಹೋಗಲು ಅನುಕೂಲವಾಗುವಂತೆ ರ್ಯಾಂಪ್ಗ್ಳನ್ನು ಕಡ್ಡಾಯವಾಗಿ ರಚಿಸಬೇಕು. ಇದೇ ರ್ಯಾಂಪನ್ನು ಪ್ರವಾಸೀ ಕೇಂದ್ರಗಳಾಗಿರುವ ಕಾಪು, ಪಡುಬಿದ್ರಿ ಬೀಚ್ ಸಹಿತ ಇತರೆಡೆಗಳಲ್ಲೂ ಅವಶ್ಯವಾಗಿ ನಿರ್ಮಿಸಬೇಕೆಂದು ಇವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ತಹಶೀಲ್ದಾರರ ಭೇಟಿಗೆ ಮೊದಲನೇ ಮಹಡಿ ಏರುವುದು ಕಷ್ಟಕರರವಾಗಿದೆ ಎಂದು ಒಬ್ಬರು ಹೇಳಿದರೆ, ಈಗ ನಮ್ಮ ಪರವಾಗಿ ಯಾವುದೇ ಅಧಿಕಾರಿ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಮತ್ತೂಬ್ಬರು ಬೇಸರ ವ್ಯಕ್ತಪಡಿಸಿದರು.
Advertisement
ಎಲ್ಲರೂ ಮತದಾನ ಮಾಡಿಮತದಾನ ನಮ್ಮ ಹಕ್ಕು. ನಮ್ಮನ್ನೂ ಕಳೆದ ಬಾರಿ ಮತದಾನ ಕುರಿತಾದ ಜಾಗೃತಿಗೆ ಬಳಸಿಕೊಂಡಿದ್ದಾರೆ. ಈ ಬಾರಿಯೂ ಮತದಾನವನ್ನು ಅವಶ್ಯ ಮಾಡುವಂತೆ ಎಲ್ಲಾ ಮತದಾರರನ್ನೂ ವಿನಂತಿಸುತ್ತೇವೆ ಎಂದು ವಿಕಲಾಂಗರು ಮನವಿ ಮಾಡಿದ್ದಾರೆ.