Advertisement

ಉಪ್ಪಿನಂಗಡಿ:ಮಗುಚಿಬಿದ್ದ ಡೀಸೆಲ್ ಟ್ಯಾಂಕರ್; ಬಿಟ್ಟಿ ಡೀಸೆಲ್ ಗೆ ನೂಕುನುಗ್ಗಲು,ಲಾಠಿ ಪ್ರಹಾರ

03:08 PM Mar 13, 2021 | Team Udayavani |

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ 34ನೇ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಗಾಲಿ ಕಳಚಿದ ಕಾರಣ ಮಗುಚಿ ಬಿದ್ದ ಘಟನೆ ಶನಿವಾರ ನಡೆದಿದೆ.

Advertisement

ಘಟನೆಯಲ್ಲಿ ಟ್ಯಾಂಕರ್ ಚಾಲಕ ಮಹೇಶ್ ಸಣ್ಣಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಗೆದ್ದಾಗ ಜೈ ಶ್ರೀರಾಮ್ ಬದಲು ಅಲ್ಲಾಹು ಅಕ್ಬರ್ ಕೂಗಿದ್ದರೆ ಸಂಗಮೇಶ್ ಗೆ ಸಮಾಧಾನ ಆಗ್ತಿತ್ತೇ?

ಮಂಗಳೂರಿನಿಂದ ಕೋಲಾರ ಕ್ಕೆ ಹೋಗುತ್ತಿದ್ದ ಟ್ಯಾಂಕರ್ ಬೊಳ್ಳಾರು ಬಳಿ ಮುಂಭಾಗದ ಗಾಲಿಗಳೆರಡು ಕಳಚಿಕೊಂಡ ಕಾರಣ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

Advertisement

ಡೀಸೆಲ್ ಗಾಗಿ ನೂಕುನುಗ್ಗಲು: ಟ್ಯಾಂಕರ್ ಮಗುಚಿಬಿದ್ದರೂ ಸುಮಾರು ಅರ್ಧ ಘಂಟೆಗಳ ಪೊಲೀಸರು ಸ್ಥಳಕ್ಕೆ ಬಾರದ ಕಾರಣ ಸ್ಥಳಿಯರು ಮತ್ತು ವಾಹನ ಚಾಲಕರು ಡೀಸೆಲ್ ತುಂಬಿಸಲು ಆರಂಭಿಸಿದ್ದರು. ಪರಿಣಾಮ ಸ್ಥಳದಲ್ಗಲಿ ನೂಕು ನುಗ್ಗಲು ಉಂಟಾಗಿತ್ತು. ನಂತರ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಡೀಸೆಲ್ ತುಂಬಿಸಿದ ಸ್ಥಳೀಯರಿಗೆ, ವಾಹನ ಚಾಲಕರಿಗೆ ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು.

ಇದನ್ನೂ ಓದಿ: ಸಿಡಿ ಪ್ರಕರಣ: ಬಾಲ್ಕಿಯಲ್ಲಿ ಯುವಕನನ್ನು ವಶಕ್ಕೆ ಪಡೆದ ಎಸ್ಐಟಿ; ಸಿಡಿಗಳು ಪತ್ತೆ!

ಇದನ್ನೂ ಓದಿ:ಹೊತ್ತಿ ಉರಿದ ಶತಾಬ್ದಿ ಎಕ್ಸ್‌ಪ್ರೆಸ್‍ ರೈಲು ಬೋಗಿ : ತಪ್ಪಿದ ಭಾರಿ ದುರಂತ

Advertisement

Udayavani is now on Telegram. Click here to join our channel and stay updated with the latest news.

Next