Advertisement

ದೆಹಲಿಗೆ ಹೋಗಿ ಲಾಬಿ ಮಾಡದೇ ಲಭಿಸಿದೆ ಸಚಿವ ಸ್ಥಾನ

01:10 PM Jun 14, 2018 | |

ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಅವರಿಗಾಗಿ ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ತಿಕೋಟ ಕ್ಷೇತ್ರವನ್ನು ತ್ಯಾಗ ಮಾಡಿ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರೊಂದಿಗೆ ಎಂದಿಗೂ ನಾನಂತೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದೇನೆ. ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸಂಜೆ ನಗರದ ಡಾ| ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು
ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರದ ಹಿಂದೆ ಎಂದೂ ಓಡಿದವನಲ್ಲ. ಶಾಶ್ವತವಲ್ಲದ ಸಚಿವ ಸ್ಥಾನದ  ಅಧಿಕಾರಕ್ಕಾಗಿ ಲಾಬಿ ಮಾಡಲಿಲ್ಲ, ಅದಕ್ಕಾಗಿ ದೆಹಲಿಗೆ ಅಲೆಯಲಿಲ್ಲ. ಹೈಕಮಾಂಡ್‌ ನನ್ನ ಸಾಮರ್ಥ್ಯ ಮನದಟ್ಟು ಮಾಡಿಕೊಂಡು ತಾನಾಗಿಯೇ ನನಗೆ ಸಚಿವನಾಗುವ ಅವಕಾಶ ನೀಡಿದೆ. ಸಚಿವ ಸಂಪುಟ ರಚನೆ ಹಿಂದಿನ ದಿನವೂ ಸಚಿವ ಸ್ಥಾನಕ್ಕಾಗಿ ಓಡಾಡದೇ ನಿರ್ಲಿಪ್ತನಾಗಿದ್ದೆ.

ಮಧ್ಯರಾತ್ರಿ ಪಕ್ಷದ ವರಿಷ್ಠರು ಕರೆ ಮಾಡಿ ಸಚಿವ ಸಂಪುಟದಲ್ಲಿ ಸೇರ್ಪಡೆಗೆ ಸಿದ್ಧರಾಗಿ ಎಂದು ಹೇಳಿದಾಗಲೇ ನನಗೂ ತಿಳಿದದ್ದು. ಹೀಗಾಗಿ ಅಧಿಕಾರ ಎಂದಿಗೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ತಾನಾಗಿಯೇ ದೊರಕಿದೆಯೇ ಹೊರತು ಲಾಬಿ ಮಾಡಿ ಪಡೆದುದಲ್ಲ. ದೊರಕಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಲವು ನಾಯಕರು ಸಮರ್ಥರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಕಟಿಸಿದ್ದರು. ಹೀಗಾಗಿ ಈ ಬಾರಿ ಸಚಿವ ಸ್ಥಾನ ದೊರಕುವ ವಿಶ್ವಾಸವಿತ್ತು. ಕಾಂಗ್ರೆಸ್‌ ಪಕ್ಷ ನನಗೆ ಅವಕಾಶ ನೀಡಿತು. ಜನಸೇವೆ ಮಾಡುವ ಅವಕಾಶ ಕೊಟ್ಟಿತು ಎಂದರು. ಮತದಾರರ ಋಣ ತೀರಿಸಲು
ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಂ.ಬಿ. ಪಾಟೀಲ  ಅವರಿಗಾಗಿ ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ತಿಕೋಟ ಕ್ಷೇತ್ರವನ್ನು ತ್ಯಾಗ
ಮಾಡಿ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಹೋಗಿದ್ದೇನೆ. ಅವರೊಂದಿಗೆ ಎಂದಿಗೂ ನಾನಂತೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದೇನೆ.  ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ ಎಂಬುದು ಕೇವಲ ಊಹಾಪೋಹ ಮಾತ್ರ. ಎಂಬಿ.ಪಾಟೀಲ ಅವರೊಂದಿಗೆ ಬಾಂಧವ್ಯ ಸರಿ ಇಲ್ಲದಿದ್ದರೆ ಕ್ಷೇತ್ರ ತ್ಯಾಗ ಮಾಡುತ್ತಿರಲಿಲ್ಲ ಎಂದರು.

ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರಿಗೆ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲಾ ಏಳೂ ಶಾಸಕರು ನಮ್ಮ ಸ್ವಾರ್ಥ ಬದಿಗಿಟ್ಟು ಸಂಪೂರ್ಣ ಸಹಕಾರ ನೀಡಿದ್ದೇವೆ. ಇದೀಗ ನಾನು ಸಚಿವನಾಗಿರುವ ಈ ಹಂತದಲ್ಲಿ ಸಂಪೂರ್ಣ ಸಹಕಾರ ನೀಡುವ ಅವರ ಹೇಳಿಕೆಗೆ ನಾನು ಅಭಿನಂದಿಸುತ್ತೇನೆ ಎಂದರು.  ಡಿಸಿಸಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಮಾಜಿ ಶಾಸಕರಾದ ಡಾ| ಎಂ.ಎಸ್‌.
ಬಾಗವಾನ, ವಿಠಲ ಕಟಕದೊಂಡ, ಕಾಂಗ್ರೆಸ್‌ ಮುಖಂಡರಾದ ಬಿ.ಎಸ್‌ .ಪಾಟೀಲ-ಯಾಳಗಿ, ಆಜಾದ್‌ ಪಟೇಲ್‌, ಹಾಸಿಂಪೀರ ವಾಲೀಕಾರ, ಎಸ್‌.ಎಂ. ಪಾಟೀಲ ಗಣಿಹಾರ ಉಪಸ್ಥಿತರಿದ್ದರು.

Advertisement

ಎಂ.ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಐದು ವರ್ಷ ಉತ್ತಮ ಕೆಲಸ ಮಾಡಿರುವ ಕಾರಣ ಅವರು ಈಗ ವಿಶ್ರಾಂತಿ ಪಡೆಯಲಿ. ಈ ಬಾರಿ ಸಿ.ಎಸ್‌.ನಾಡಗೌಡ ಅವರೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ಆಯ್ಕೆ ಆಗಲಿಲ್ಲ ಎಂಬ ಕೊರಗಿದೆ. ಅದರ ಮಧ್ಯೆಯೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಶಿವಾನಂದ ಪಾಟೀಲ ಹಾಗೂ ನಾನು ಕಟ್ಟಿಕೊಂಡಿರುವ ಕನಸುಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ. ದೊರಕಿರುವ ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಸಚಿವ ಶಿವಾನಂದ ಪಾಟೀಲ ಬದ್ಧತೆ ತೋರಲಿದ್ದಾರೆ. 

 ಯಶವಂತರಾಯಗೌಡ ವಿ. ಪಾಟೀಲ ಶಾಸಕರು, ಇಂಡಿ ಕ್ಷೇತ

ಬಿಜೆಪಿ ಪಕ್ಷದಲ್ಲಿದ್ದ ನಾನು ಅಲ್ಲೇ ಇದ್ದಿದ್ದರೆ ಈಗ ಡಿಸಿಎಂ ಆಗಿರುತ್ತಿದ್ದೆ. ಸುಮ್ಮನೇ ನನ್ನನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆ ತಂದು ಅಧಿಕಾರದಿಂದ ವಂಚಿತನನ್ನಾಗಿ ಮಾಡಿದಿರಿ ಎಂದು ಶಿವಾನಂದ ಪಾಟೀಲ ಅವರು ನಮ್ಮನ್ನು ಪ್ರೀತಿಯಿಂದ ಕುಟುಕುತ್ತಿದ್ದರು. ಈಗ ಅವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಅಧಿಕಾರ ದೊರಕಿದೆ. ಬಿಜೆಪಿ ಪಕ್ಷದಲ್ಲಿದ್ದ ಶಿವಾನಂದ ಪಾಟೀಲ ಅವರನ್ನು ನಾನು ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಕರೆ ತಂದೆವು. ಆದರೆ ಸಚಿವ ಸ್ಥಾನದ ಅಧಿಕಾರ ದಕ್ಕಲು ದಶಕಗಳೇ ಕಳೆಯಬೇಕಾಯಿತು  

ಸಿ.ಎಸ್‌.ನಾಡಗೌಡ, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next