Advertisement

ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?

09:58 PM Mar 31, 2023 | Team Udayavani |

ಮಂಗಳೂರು: ಮೈಸೂರಿನ ಉದ್ಯಮಿ ದೇವೇಂದ್ರ ಮತ್ತು ಆತನ ಪತ್ನಿ, ಅವರ ಅವಳಿ ಜವಳಿ ಪುತ್ರಿಯರ ಶವ ಇಂದು ನಗರದ ಲಾಡ್ಜ್ ನಲ್ಲಿ ಪತ್ತೆಯಾಗಿದ್ದು ದೇವೇಂದ್ರ ಪ್ರವಾಸಕ್ಕೆಂದು ಅವರನ್ನು ಮಂಗಳೂರಿಗೆ ಕರೆತಂದಿದ್ದ ಎನ್ನಲಾಗಿದೆ.

Advertisement

ಮಾ.27ರಂದು ಲಾಡ್ಜ್ ಗೆ ಪತ್ನಿ, ಮಕ್ಕಳೊಂದಿಗೆ ಬಂದಿದ್ದ ದೇವೇಂದ್ರ ಮತ್ತೆ ಎರಡು ದಿನ ಉಳಿದುಕೊಳ್ಳುವುದಾಗಿ ಲಾಡ್ಜ್ ನವರಿಗೆ ತಿಳಿಸಿದ್ದ. ಶುಕ್ರವಾರ ಬೆಳಗ್ಗೆ ಕೂಡ ರೂಮಿನಿಂದ ಯಾರೂ ಹೊರ ಬರದಿದ್ದಾಗ ಲಾಡ್ಜ್ ಸಿಬಂದಿ ಬೇರೊಂದು ಕೀ ಹಾಕಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿತ್ತು. ದೇವೇಂದ್ರ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತೊಟ್ಟಿದ್ದರೆ ಪತ್ನಿ ಮತ್ತು ಮಕ್ಕಳು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲೆ ಸಾವನ್ನಪ್ಪಿದ್ದರು.

ದೇವೆಂದ್ರ ತನ್ನ ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದು ಅನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು. ನಿದ್ದೆ ಮಾತ್ರೆ, ವಿಷ ನೀಡಿರಬಹುದು ಅಥವ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂಬುದು ಪೊಲೀಸರ ಅಂದಾಜು. ಸ್ಪಷ್ಡ ಮಾಹಿತಿ ಮರಣೋತ್ತರ ಪರೀಕ್ಷಾ ವರದಿ ಬಂದ‌ ಅನಂತರವೇ ಸಿಗಲಿದೆ.

ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿರಲಿಲ್ಲ

ದೇವೇಂದ್ರ ಮೈಸೂರಿನಲ್ಲಿ ಉದ್ಯಮ ಹೊಂದಿದ್ದು ಆತನ ಜತೆ ಹಲವರು ಕೆಲಸ ಮಾಡುತ್ತಿದ್ದರು.‌ಆದರೆ ಆತ ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿರಲಿಲ್ಲ ಎಂದು ದೇವೇಂದ್ರ ಅವರ ಸಹೋದರ ತಿಳಿಸಿದ್ದಾರೆ.

Advertisement

ಮಂಗಳೂರಿಗೆ ಬಂದ ಬಳಿಕ ನಿರ್ಧಾರ?
ದೇವೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೆ ಬಂದಿದ್ದರೆ ಅಥವಾ ಮಂಗಳೂರಿಗೆ ಬಂದ ಮೇಲೆ ಏಕಾಏಕಿ‌ ನಿರ್ದಾರ ಮಾಡಿದರೆ ಗೊತ್ತಾಗಿಲ್ಲ. ಲಾಡ್ಜ್ ನಲ್ಲೊ ಕೃತ್ಯ ಎಸಗುವ ಮೊದಲು ದೇವೇಂದ್ರ ಅವರಿಗೆ ಬಂದಿರುವ ಕರೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತಿ ಪತ್ನಿ ಅನ್ಯೋನ್ಯವಾಗಿದ್ದರೆಂದು ಕುಟುಂಬ ಮೂಲಗಳು ತಿಳಿಸಿವೆ. ಒಂಭತ್ತು ವರ್ಷ ವಯಸ್ಸಿನ‌ ಇಬ್ಬರು ಹೆಣ್ಮಕ್ಕಳು ಸೇರಿದಂತೆ ನಾಲ್ವರ ಸಾವು ಮನಕಲಕುವಂತಿದೆ. ಇಂತಹ ದುಡುಕಿನ ನಿರ್ಧಾರ ಅಕ್ಷಮ್ಯ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸತ್ಯ ಎಲ್ಲರನ್ನು ತಲುಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next