Advertisement

ಡಯಾಲಿಸಿಸ್‌ ವಿಭಾಗಕ್ಕೆ ಬೇಕಿದೆ ಕಾಯಕಲ್ಪ

04:45 PM Sep 06, 2021 | Team Udayavani |

ಸಕಲೇಶಪುರ: ದೊಡ್ಡ ನಗರಗಳು ಹಾಗೂ ಜಿಲ್ಲಾಕೇಂದ್ರಗಳಿಗೆ ಸೀಮಿತವಾಗಿದ್ದ ಡಯಾಲಿಸಿಸ್‌ ಕೇಂದ್ರಇದೀಗ ತಾಲೂಕು ಆಸ್ಪತ್ರೆಯಲ್ಲಿ¨ರೂ‌ª ಈ ಕೇಂದ್ರಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಗೆಹರಿಸಲು ಜನಪ್ರತಿನಿಧಿಗಳು ಇಚ್ಛಾ ಶಕ್ತಿ ತೋರಬೇಕಿದೆ.

Advertisement

3 ವರ್ಷಗಳ ಹಿಂದೆ ತಾಲೂಕಿನ ಮೂತ್ರಪಿಂಡರೋಗಿಗಳ ಅನುಕೂಲಕ್ಕಾಗಿ ಶಾಸಕ ಎಚ್‌.ಕೆಕುಮಾರಸ್ವಾಮಿ 2 ಯಂತ್ರಗಳಿರುವ ಡಯಾಲಿಸಿಸ್‌ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದರು. ಹಲವಾರುಮೂತ್ರಪಿಂಡದ ರೋಗಿಗಳು ಇದರ ಪ್ರಯೋಜನಪಡೆದಿದ್ದಾರೆ.

ಡಯಾಲಿಸಿಸ್‌ ಕೇಂದ್ರ ತಾಲೂಕು ಕೇಂದ್ರದಲ್ಲೇ ಇರುವುದರಿಂದ ಹಾಸನ, ದೂರದಮಂಗಳೂರು, ಬೆಂಗಳೂರುಗಳಿಗೆ ಅಪಾರ ಹಣ ವೆಚ್ಚಮಾಡಿ ಅಲೆದಾಡುವುದು ತಪ್ಪಿದೆ. ಆದರೆ ಇಲ್ಲಿನಡಯಾಲಿಸಿಸ್‌ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿದ್ದುಇದನ್ನು ಬಗೆಹರಿಸಲು ಉನ್ನತ ವೈದ್ಯಾಧಿಕಾರಿಗಳುಜನಪ್ರತಿನಿಧಿಗಳು ಮುಂದಾಗಬೇಕಿದೆ.

ಸಿಬ್ಬಂದಿಗೆ 4 ತಿಂಗಳಿಂದ ಸಂಬಳವಿಲ್ಲ: ಇಲ್ಲಿನಡಯಾಲಿಸಿಸ್‌ ಕೇಂದ್ರದಲ್ಲಿ ಇಬ್ಬರು ತಾಂತ್ರಿಕ ತಜ್ಞರುಇಬ್ಬರು ಡಿ-ಗ್ರೂಪ್‌ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಬಿ.ಆರ್‌.ಎಸ್‌ ರೀಸರ್ಚ್‌ ಇನಸ್ಟಿಟ್ಯೂಟ್‌ಎಂಬಖಾಸಗಿ ಕಂಪನಿಈ ಸಿಬ್ಬಂದಿಹೊರಗುತ್ತಿಗೆಯಲ್ಲಿನೇಮಕಾತಿ ಮಾಡಿದೆ. ಆದರೆ ಕಳೆದ 4 ತಿಂಗಳಿಂದಇವರಿಗೆ ಸಂಬಳವಾಗಿಲ್ಲ.

ಆದರೂ ಡಯಾಲಿಸಿಸ್‌ರೋಗಿಗಳ ಹಿತದೃಷ್ಟಿಯಿಂದ ಸಂಬಳದ ನಿರೀಕ್ಷೆಯಲ್ಲೇಕಾರ್ಯನಿರ್ವಹಿಸುತ್ತಿದ್ದಾರೆ.ಅಪ್ಪಿ ತಪ್ಪಿ ಇದೇ ರೀತಿ ಸಂಬಳ ನೀಡದಿದ್ದಲ್ಲಿ ಇಲ್ಲಿನಸಿಬ್ಬಂದಿಗಳುಕರ್ತವ್ಯಕ್ಕೆ ಗೈರುಹಾಜರಾದರೆ ರೋಗಿಗಳಪಾಡೇನು? ತಕ್ಷಣಕ್ಕೆ ಡಯಾಲಿಸಿಸ್‌ ಆಗದೆ ರೋಗಿಗಳು ಮೃತಪಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಇವರಿಗೆ ಸಂಬಳಕೊಡಿಸಲುವ್ಯವಸ್ಥೆ ಮಾಡಬೇಕಿದೆ.ಇರುವುದು 2 ಯಂತ್ರಗಳು: 15ಕ್ಕೂ ಹೆಚ್ಚು ಮಂದಿರೋಗಿಗಳು ಡಯಾಲಿಸಿಸ್‌ನ ಪ್ರಯೋಜನವನ್ನುಪ್ರತಿವಾರ ಪಡೆಯುತ್ತಿದ್ದಾರೆ.

Advertisement

ಇನ್ನು ಐದಾರು ಮಂದಿಡಯಾಲಿಸಿಸ್‌ಗೆ ನೊಂದಣಿ ಮಾಡಿಸಿಕೊಂಡಿದ್ದರೂಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕೇವಲ2 ಯಂತ್ರಗಳುಮಾತ್ರ ಇಲ್ಲಿದೆ.ಬೆಳಗ್ಗೆ7 ಗಂಟೆಯಿಂದಲೆಡಯಾಲಿಸಿಸ್‌ ಸೇವೆ ಆರಂಭಿಸಿ ನಿತ್ಯ 3 ಸುತ್ತುಗಳಲ್ಲಿಡಯಾಲಿಸಿಸ್‌ ಸೇವೆ ನೀಡಲಾಗುತ್ತಿದೆ. ಆದರೂಪ್ರತಿನಿತ್ಯ ಕೇವಲ 6 ರೋಗಿಗಳಿಗೆ ಮಾತ್ರ ಸೇವೆ ನೀಡಲುಸಾಧ್ಯವಾಗುವುದರಿಂದ ವಾರದಲ್ಲಿ ಪ್ರತಿ ರೋಗಿಗಳಿಗೆ 2ಬಾರಿ ಮಾತ್ರ ಡಯಾಲಿಸಿಸ್‌ ಮಾಡಲುಸಾಧ್ಯವಾಗುತ್ತಿದೆ.

ಕೆಲವೊಂದು ರೋಗಿಗಳಿಗೆ ವಾರದಲ್ಲಿ3 ಬಾರಿ ಡಯಾಲಿಸಿಸ್‌ ಅಗತ್ಯವಿದ್ದರೂ ಸೇವೆ ನೀಡಲುಸಾಧ್ಯವಾಗುವುದಿಲ್ಲ. ಜತೆಗೆ ಇರುವ ಎರಡುಯಂತ್ರದಲ್ಲಿ ಒಂದು ಕೆಟ್ಟು ಹೋದರೆ ರೋಗಿಗಳಕಥೆ ಏನು?. ಈ ಹಿನ್ನೆಲೆಯಲ್ಲಿ ಕೂಡಲೆಮತ್ತೂಂದು ಡಯಾಲಿಸಿಸ್‌ ಯಂತ್ರದ ವ್ಯವಸ್ಥೆಜನಪ್ರತಿನಿಧಿಗಳು ಮಾಡಬೇಕಿದೆ.

ಮೂತ್ರಪಿಂಡ ವೈದ್ಯರ ಕೊರತೆ: ಕಿಡ್ನಿರೋಗಿಗಳಿಗೆ ಚಿಕಿತ್ಸೆ ನೀಡಲು ಮೂತ್ರತಜ್ಞರುಹಾಸನದ ಜಿಲ್ಲಾಸ್ಪತ್ರೆಯÇÉೆ ಇಲ್ಲ, ಇನ್ನುತಾಲೂಕು ಆಸ್ಪತ್ರೆಯಲ್ಲಿ ತಜ್ಞರನ್ನು ನಿರೀಕ್ಷಿಸುವುದುಕನಸಿನಮಾತೆ,ಈ ಹಿನ್ನೆಲೆಯಲ್ಲಿ ಸರ್ಕಾರಇತ್ತ ಗಮನವರಿಸಿ ಕನಿಷ್ಠ 15 ದಿನಕ್ಕೊಮ್ಮೆ ಮೂತ್ರತಜ್ಞರು ತಾಲೂಕು ಕೇಂದ್ರಕ್ಕೆ ಬರಲು ಕ್ರಮಕೈಗೊಳ್ಳಬೇಕಾಗಿದೆ. ಒಟ್ಟಾರೆಯಾಗಿ ಡಯಾಲಿಸಿಸ್‌ಕೇಂದ್ರ ತಾಲೂಕುಆಸ್ಪತ್ರೆಯಲ್ಲಿ ಇರುವುದರಿಂದ ಹಲವುಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳಿಗೆ ನೆಮ್ಮದಿತಂದಿದ್ದರು ಇನ್ನುಷ್ಟು ಅಗತ್ಯ ಸೌಲಭ್ಯಗಳನ್ನು ನೀಡಿದಲ್ಲಿರೋಗಿಗಳ ಮನಸ್ಸಿಗೆ ಮತ್ತಷ್ಟು ನೆಮ್ಮದಿ ದೊರಕಬೇಕಿದೆ.

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next