Advertisement

ಮತಾಂತರ ವೈಯಕ್ತಿಕ ಆಯ್ಕೆ

12:20 PM Feb 28, 2021 | Team Udayavani |

ಚಾಮರಾಜನಗರ: ಮತಾಂತರ ಹೊಂದಿದ ಆದಿವಾಸಿಗಳಿಗೆ ಯಾವುದೇ ಬೆನಿಫಿಟ್‌ ಕೊಡಬಾರದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಮತಾಂತರ ಅವರ ವೈಯಕ್ತಿಕ ಆಯ್ಕೆ. ಯಾವ ಕಾರಣಕ್ಕೆ ಮತಾಂತರ ಹೊಂದುತ್ತಾರೆ ಎಂಬುದನ್ನು ಪ್ರತಾಪ್‌ ಸಿಂಹ ಗಮನಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಧ್ರುವನಾರಾಯಣ ಹೇಳಿದರು.

Advertisement

ಸಾಮಾಜಿಕ ಅನ್ಯಾಯ ವಾದಾಗ, ಜಾತೀಯತೆ ಭೀಕರವಾದಾಗ, ಸ್ವಾಭಿಮಾನಕ್ಕೋಸ್ಕರ ಮತಾಂತರ ಹೊಂದಿದ್ದಾರೆ. ಆದಿವಾಸಿ ಗಳಿಗೆ ರೇಷನ್‌ ಕೊಡಬೇಡಿ ಎಂದು ಹೇಳಲು ಇವರ್ಯಾರು? ಪ್ರತಿ ಬಡವರಿಗೂ ಬಿಪಿಎಸ್‌ ಪಡಿತರ ಕೊಡಬೇಕು. ಹೀಗೆ ಹೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದರು.

ಮಹದೇವಪ್ರಸಾದ್‌ ನೆನೆದ ಧ್ರುವ: ಮಾಜಿ ಸಚಿವರಾದ ಎಚ್‌.ಎಸ್‌. ಮಹದೇವಪ್ರಸಾದ್‌ ಬದುಕಿದ್ದರೆ ನಾನು ಸಂಸತ್‌ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ ಎಂದು ಧ್ರುವನಾರಾಯಣ ಸ್ಮರಿಸಿದರು.

ಬಿಎಸ್‌ವೈ ಜನ್ಮದಿನಕ್ಕೆ ಶುಭಾಶಯ: ತಮ್ಮ ಭಾಷಣದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮದಿನಾಚರಣೆಯಿದೆ. ಅವರಿಗೆ ಎಲ್ಲ ಒಳ್ಳೆಯದಾಗಲಿ ಎಂದು ಧ್ರುವ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next