Advertisement

ಟಿ20 ವಿಶ್ವಕಪ್‌ಗೆ ಧೋನಿ ಅನುಮಾನ!

09:09 AM Apr 15, 2020 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷ ಐಪಿಎಲ್‌ ನಡೆಯದಿದ್ದರೆ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ ಮನ್‌ ಮಹೇಂದ್ರ ಸಿಂಗ್‌ ಧೋನಿ ಟೀಮ್‌ ಇಂಡಿಯಾಗೆ ಮರಳುವುದು ಕ್ಷೀಣವಾಗಲಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹೇಳಿದ್ದಾರೆ.

Advertisement

ಸ್ಟಾರ್‌ ನ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಗಂಭೀರ್‌, ಒಂದು ವೇಳೆ ಈ ವರ್ಷ ಐಪಿಎಲ್‌ ನಡೆಯದಿದ್ದರೆ, ಧೋನಿ ತಂಡಕ್ಕೆ ಮರಳುವುದು ತುಂಬಾ ಕಠಿನ. ಏಕೆಂದರೆ ಸುಮಾರು ಒಂದೂವರೆ ವರ್ಷದಿಂದ ಧೋನಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರದ ಕಾರಣ ಅವರ ಆಯ್ಕೆ ಕಷ್ಟ. ಹೀಗಾಗಿ ಅವರ ಸ್ಥಾನಕ್ಕೆ ಕೆ.ಎಲ್‌ ರಾಹುಲ್‌ ಸೂಕ್ತ ಸಂಭಾವ್ಯ ಆಟಗಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಧೋನಿಗಿಂತ ರಾಹುಲ್‌ಗೆ ಮೊದಲ ಆದ್ಯತೆ
ನಾನು ಭಾರತೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದರೆ ಧೋನಿಯನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುತ್ತಿರಲಿಲ್ಲ ಎಂದು ಆಯ್ಕೆ ಸಮಿತಿಯ ಮಾಜಿ ಪ್ರಧಾನ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್‌ ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯದ ಮಟ್ಟಿಗೆ ಟೀಮ್‌ ಇಂಡಿಯಾದ ವಿಕೆಟ್‌ ಕೀಪಿಂಗ್‌ಗೆ ಕೆ.ಎಲ್‌. ರಾಹುಲ್‌ ಸೂಕ್ತ ಆಟಗಾರ. ಕಳೆದ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ ರಾಹುಲ್‌ ಉತ್ತಮವಾಗಿ ಕೀಪಿಂಗ್‌ ನಡೆಸಿದ್ದಾರೆ. ಆದ್ದರಿಂದ ಅವರನ್ನು ನಾನು ಆಯ್ಕೆ ಮಾಡುವೆ. ಉಳಿದಂತೆ ರಿಷಭ್‌ ಪಂತ್‌ ಅವರಲ್ಲಿ ಅಪಾರ ಪ್ರತಿಭೆ ಇದೆ. ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಆದರೆ ಅವರನ್ನು ತಂಡದ ಒಂದು ಭಾಗವಾಗಿ ಆಯ್ಕೆಮಾಡಿದರೂ ಕೀಪಿಂಗ್‌ ಜವಾಬ್ದಾರಿಯನ್ನು ರಾಹುಲ್‌ಗೆ ವಹಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದರಲ್ಲಿ ಯಾವುದೇ ತರದ ರಾಜಕೀಯವಿಲ್ಲ. ಐಪಿಎಲ್‌ ನಡೆಯದೇ ಇದ್ದರೆ ವಿಶ್ವಕಪ್‌ ತಂಡಕ್ಕೆ ಧೋನಿ ಆಯ್ಕೆ ಖಂಡಿತಾ ಸಾಧ್ಯವಿಲ್ಲ. ಅವರ ಫಿಟ್‌ನೆಸ್‌ ಬಗ್ಗೆ ನನಗೆ ಅನುಮಾನವಿಲ್ಲ. ಅವರೊಬ್ಬ ದಿಗ್ಗಜ ಹಾಗೂ ಅದ್ಭುತ ಆಟಗಾರ ಕೂಡ ಹೌದು. ನಾನು ಧೋನಿಯ ಬಹುದೊಡ್ಡ ಅಭಿಮಾನಿ. ಆದರೆ ವಿಶ್ವಕಪ್‌ನಂತಹ ಮಹತ್ವದ ಟೂರ್ನಿ ವೇಳೆ ವೈಯಕ್ತಿಕ ಅಭಿಪ್ರಾಯವನ್ನು ದೂರವಿಟ್ಟು ತಂಡದ ಒಳಿತಿನ ಬಗ್ಗೆ ಯೋಚಿಸಬೇಕು ಎಂದು ಶ್ರೀಕಾಂತ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next