Advertisement

“ಧೋನಿ ತಂಡಕ್ಕೆ ಮರಳುವುದು ಬಲು ಕಷ್ಟ’

11:48 PM May 16, 2020 | Sriram |

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಭಾರತ ತಂಡಕ್ಕೆ ಮರಳುವುದು ನಿಜಕ್ಕೂ ಕಷ್ಟದ ಕೆಲಸ ಎಂದು ಮಾಜಿ ಆಟಗಾರ ವೆಂಕಟೇಶ್‌ ಪ್ರಸಾದ್‌ ಹೇಳಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಸಾದ್‌ ಅವರು ಕಳೆದ ಒಂದು ವರ್ಷದಿಂದ ಧೋನಿ ಅವರು ಕ್ರಿಕೆಟ್‌ ಆಡಿಲ್ಲ. ಹೀಗಾಗಿ ತಂಡಕ್ಕೆ ಮರಳುವ ಹಾದಿ ಅಷ್ಟು ಸುಲಭವಲ್ಲ. ಧೋನಿ ಅವರು ತುಂಬಾ ಫಿಟ್‌ ಆಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ವಯಸ್ಸಾದಂತೆ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಧೋನಿ 40ರ ಸಮೀಪದಲ್ಲಿದ್ದಾರೆ. ಆದ್ದರಿಂದ ಅದು ಅವರಿಗೆ ಸುಲಭವಾಗುವುದಿಲ್ಲ. ಧೋನಿ ಅವರನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಯ ನಿರ್ಧಾರವಾಗಿದೆ ಎಂದು ಪ್ರಸಾದ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next