Advertisement
ನಿವೃತ್ತಿಯ ವಿಚಾರ ಜೋರು ಚರ್ಚೆಯಲ್ಲಿರುವಾಗಲೇ ವಿಂಡೀಸ್ ಸರಣಿಯಿಂದ ಹಿಂದೆ ಸರಿದ ಧೋನಿ ಸೇನೆಯಲ್ಲಿ ಸೇವೆಗಾಗಿ 2 ತಿಂಗಳು ರಜೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಸ್ಕೈ ನ್ಪೋರ್ಟ್ಸ್ ಸಾಮಾಜಿಕ ಜಾಲತಾಣದಲ್ಲಿ “ಕರ್ತವ್ಯದ ಕರೆ???’ ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಡೇವಿಡ್ ಲಾಯ್ಡ ಆನಂದದ ಕಣ್ಣೀರಿನ ಸಂಕೇತವಿರುವ 2 ಎಮೊಜಿ ಪ್ರಕಟಿಸಿದ್ದಾರೆ. ಇದರಿಂದ ಧೋನಿ ಅಭಿಮಾನಿಗಳು ತೀವ್ರ ಸಿಟ್ಟಾಗಿದ್ದಾರೆ. ಲಾಯ್ಡ ವಿರುದ್ಧ ಬೈಗುಳಗಳ ಸುರಿಮಳೆ ಹರಿಸಿದ್ದಾರೆ.
ರಿಷಭ್ ಪಂತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ಪಳಗುವ ತನಕ ಧೋನಿ ಟೀಮ್ ಇಂಡಿಯಾದಲ್ಲಿರಬೇಕು ಎಂದು ತಂಡದ ಆಡಳಿತ ಮಂಡಳಿ ಬಯಸಿದ್ದಾಗಿ ವರದಿಯಾಗಿದೆ. “ಧೋನಿಗೆ ತನ್ನ ಪಾತ್ರ ಮತ್ತು ಸ್ಥಾನದ ಬಗ್ಗೆ ಚೆನ್ನಾಗಿ ತಿಳಿದಿದೆ. ನಮ್ಮ ಯೋಜನೆ ಮುಂದಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ತಂಡವನ್ನು ಸಜ್ಜುಗೊಳಿಸುವುದು. ಹೀಗಾಗಿ ಧೋನಿ ತಂಡದ ಮೆಂಟರ್ ಆಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಮುಖ್ಯವಾಗಿ ಪಂತ್ ಚೆನ್ನಾಗಿ ಪಳಗಬೇಕಿದೆ. ಇದಕ್ಕೆ ಧೋನಿ ಮಾರ್ಗದರ್ಶನ ಅಗತ್ಯ’ ಎಂಬುದಾಗಿ ತಂಡದ ಮೂಲವೊಂದು ಹೇಳಿರುವುದು ಅತ್ಯಂತ ಕುತೂಹಲಕಾರಿಯಾಗಿದೆ.