Advertisement

Dharwad: ಯುವತಿ ವಿಚಾರವಾಗಿ ಮೂವರಿಗೆ ಚಾಕು ಇರಿತ

10:52 PM Aug 11, 2023 | Team Udayavani |

ಧಾರವಾಡ: ಯುವತಿ ವಿಚಾರವಾಗಿ ವಿದ್ಯಾಕಾಶಿ ಧಾರವಾಡದಲ್ಲಿ ಹಾಡು ಹಗಲೇ ನಡು ರಸ್ತೆಯಲ್ಲೇ ಮೂವರ ಮೇಲೆ ಚಾಕು ಇರಿತವಾದ ಘಟನೆ ನಡೆದಿದೆ ಶುಕ್ರವಾರ ಸಂಜೆ ನಡೆದಿದೆ.

Advertisement

ಕಿರಣ, ಆಸೀಫ್ ಹಾಗೂ ಶಾನವಾಝ್ ಎಂಬುವವರೇ ಚಾಕು ಇರಿತಕ್ಕೆ ಒಳಗಾದವರು. ಯುವಕ ಹಾಗೂ ಯುವತಿ ಧಾರವಾಡ ನಗರದ ಎಲ್ ಐ ಸಿ ಬಳಿ ರಸ್ತೆ ಮೇಲೆ ಹೋಗುವಾಗ ಆಟೋದಲ್ಲಿ ಬಂದ 6 ಯುವಕರು ಏಕಾಎಕಿ ದಾಳಿ‌ ಮಾಡಿದ್ದಾರೆ. ಈ ವೇಳೆ ಯುವತಿ ಜೊತೆ ಇದ್ದ ಮೂವರ ಮೇಲೆ ಆಟೋದಲ್ಲಿ ಬಂದಿದ್ದ 6 ಯುವಕರು ಚಾಕು ಇರಿದು ಪರಾರಿಯಾಗಿದ್ದಾರೆ.

ಸದ್ಯ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ‌ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಓರ್ವನ ಹೊಟ್ಟೆಗೆ ಚಾಕು ಇರಿದ ನಂತರ, ದುಷ್ಕರ್ಮಿಗಳು, ಆ‌ ಚಾಕು ಹೊಟ್ಟೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಗಾಯಾಳು‌ ಹೊಟ್ಟೆಯಲ್ಲೇ ಚಾಕು ಇದ್ದು, ಆತನ‌ ಹೊಟ್ಟೆಯಲ್ಲಿ‌ ಚಾಕು ಚುಚ್ಚಿದ ಸ್ಥಿತಿಯಲ್ಲೇ ಅವನ್ನ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಕು ಇರಿದ ಆರೋಪಿಗಳು ಪರಾರಿಯಾಗಿದ್ದು, ಅವರನ್ನ ಹಿಡಿಯಲು ಬಲೆ ಬಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next