Advertisement

Dharawad: ಸಚಿವ ಲಾಡ್ – ಜಾರಕಿಹೊಳಿ ರಹಸ್ಯ ಭೇಟಿ… ರಾಜಕೀಯ ಚರ್ಚೆ

10:37 PM Sep 11, 2024 | Team Udayavani |

ಧಾರವಾಡ: ಸಚಿವ ಸತೀಶ ಜಾರಕಿಹೊಳಿ ಮುಂದಿನ ಸಿಎಂ ಆಗಲಿ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಧಾರವಾಡದಲ್ಲಿ ಸಚಿವರಾದ ಸಂತೋಷ ಲಾಡ್ ಹಾಗೂ ಸತೀಶ ಜಾರಕಿಹೊಳಿ ಭೇಟಿಯಾಗಿ ಚಹಾ ಕೂಟ ನಡೆಸುವುದರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ.

Advertisement

ಧಾರವಾಡದ ಕೋರ್ಟ್ ಬಳಿಯ ಕೆಫೆಯೊಂದರಲ್ಲಿ ಒಬ್ಬರನ್ನೊಬ್ಬರು ಭೇಟಿಯಾದ ಸಚಿವರು ಚಹಾ ಸೇವನೆ ಮಾಡಿ ಕೆಲ ಹೊತ್ತು ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಆಮೇಲೆ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಇಬ್ಬರೂ ಸಚಿವರು ರಹಸ್ಯ ಮಾತುಕತೆ ಕೂಡ ನಡೆಸಿದ್ದಾರೆ.

ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಲೆಂದೇ ಸತೀಶ ಜಾರಕಿಹೊಳಿ ಬಂದಿದ್ದರು ಎನ್ನಲಾಗಿದೆ. ಸದ್ಯ ಇಬ್ಬರೂ ಸಚಿವರ ಮಧ್ಯೆ ನಡೆದಿರುವ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Bidar: ಸಾಲ‌ ಬಾಧೆ… ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವೈದ್ಯ, ಕಾಡಿನಲ್ಲಿ ದೇಹ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next