Advertisement

ಧಾರವಾಡ ಜಿಲ್ಲಾ ಕಸಾಪ ಚುನಾವಣೆ : ತಡೆಯಾಜ್ಞೆ ತೆರವು ಗೊಳಿಸಿದ ಹೈಕೋರ್ಟ್

07:29 PM Nov 15, 2021 | Team Udayavani |

ಧಾರವಾಡ: ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಚುನಾವಣೆ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಪೀಠವು, ಇದೀಗ ತಡೆಯಾಜ್ಞೆ ತೆರವುಗೊಳಿಸಿ, ರಿಟ್ ಅರ್ಜಿಯನ್ನೇ ವಜಾಗೊಳಿಸಿದೆ.

Advertisement

ಡಾ|ಲಿಂಗರಾಜ ಅಂಗಡಿ ಅವರು ಕಸಾಪ ನಿಯಮಾವಳಿ ಮೀರಿ ಅದ್ಯಕ್ಷ ರಾಗಿದ್ದಾರೆ ಎಂದು,  ಇದಲ್ಲದೇ ಕಸಾಪ ನಿಯಮಾವಳಿ ಪ್ರಕಾರ ಉಪವಿಭಾಗಾಧಿಕಾರಿ ಅಥವಾ ಅದಕ್ಕಿಂತ ಮೇಲಿನ ಅಽಕಾರಿಗಳನ್ನು ಚುನಾವಣಾಕಾರಿಯಾಗಿ ನೇಮಿಸಬೇಕು ಎಂಬ ನಿಯಮ ಕೂಡ ಪಾಲಿಸಿಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕಸಾಪ ಮತ್ತು ರಿಟ್ ಅರ್ಜಿಯಲ್ಲಿನ ಇತರ

ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ನ.೧೫ಕ್ಕೆ ವಿಚಾರಣೆ ಮುಂದೂಡಿತ್ತು. ಇದೀಗ

ಸೋಮವಾರ ಹೈಕೋರ್ಟ್ ಏಕಸದಸ್ಯ ಪೀಠದ ಎದುರು ಹಾಜರಾದ ಡಾ|ಲಿಂಗರಾಜ ಅಂಗಡಿ ಹಾಗೂ ಕಸಾಪ ಪರ ವಕೀಲರು, ಕಸಾಪ

ನಿಯಮಾವಳಿ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ರಿಟ್ ಅರ್ಜಿಯನ್ನು ವಜಾಗೊಳಿಸಿ, ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ಮಾಡಿದೆ. ಕೇಂದ್ರ ಸಾಹಿತ್ಯ ಪರಿಷತ್ನ ಪರವಾಗಿ ಗುರುದೇವ ಗಚ್ಚಿನಮಠ,

Advertisement

ಡಾ|ಲಿಂಗರಾಜ ಅಂಗಡಿ ಪರವಾಗಿ ಪ್ರಕಾಶ ಉಡಿಕೇರಿ ಹಾಗೂ ರಾಜಶೇಖರ ಅಂಗಡಿ ವಕಾಲತ್ತು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next