Advertisement

ಧಾರವಾಡ: ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ

02:50 PM Aug 07, 2020 | keerthan |

ಧಾರವಾಡ: ಸತತ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಬಾಲಕಿಯೊಬ್ಬಳು ಕೊಚ್ಚಿ ಹೋಗಿದ್ದ ಗಂಜಿಗಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಭೇಟಿ ನೀಡಿ, ಬಾಲಕಿ ಮನೆಗೆ ತೆರಳಿ ಅವರ ತಂದೆ ತಾಯಿಗೆ ಸಾಂತ್ವನ ಹೇಳಿದರು.

Advertisement

ಸರಕಾರದ ನೆರವು ತಲುಪಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಬಾಲಕಿ ತೇಲಿ ಹೋದ ಸ್ಥಳಕ್ಜೆ ಭೇಟಿ ನೀಡಿ, ಅಗ್ನಿಶಾಮಕ ಹಾಗೂ ಎನ್ ಡಿಆರ್ ಎಫ್ ತಂಡ ಕೈಗೋಳ್ಳುತ್ತಿರುವ ಪರಿಹಾರ ಕಾರ್ಯ ಪರಿಶೀಲಿಸಿದರು.

ತಹಸಿಲ್ದಾರ ಅಶೋಕ ಶಿಗ್ಗಾಂವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಗುರುವಾರ ಮಧ್ಯಾಹ್ನ ಗಂಜಿಗಟ್ಟಿಯ ಹಿರೆಕೆರಿ ಕೋಡಿ ತುಂಬಿ ಹರಿಯುತ್ತಿತ್ತು. ಈ ವೇಳೆ ಇದನ್ನು ದಾಟುವಾಗ ಗ್ರಾಮದ 9 ವರ್ಷದ ಬಾಲಕಿ ಶ್ರೀದೇವಿ ಗಾಣಿಗೇರ ಆಯತಪ್ಪಿ ಬಿದ್ದು ನೀರಲ್ಲಿ ತೇಲಿ ಹೋಗಿದ್ದಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next