Advertisement

ಧರ್ಮಸ್ಥಳ: ಹೊಸ ವರ್ಷಕ್ಕಾಗಿ ಹೂ, ಫ‌ಲವಸ್ತುಗಳಿಂದ ದೇಗುಲ ಅಲಂಕಾರ

06:48 AM Jan 01, 2021 | Team Udayavani |

ಬೆಳ್ತಂಗಡಿ: ಹೊಸ ವರ್ಷ ಸಂಭ್ರಮದ ಸರಳ ಆಚರಣೆಗಾಗಿ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ. ದೇವಸ್ಥಾನ, ಹೆಗ್ಗಡೆಯವರ ನಿವಾಸ “ಬೀಡು’ ಹಾಗೂ ಇತರ ಕಟ್ಟಡಗಳನ್ನು ಪ್ರಾಕೃತಿಕ ಪರಿಕರಗಳಿಂದ ಆಕರ್ಷಕ ವಿನ್ಯಾಸದಲ್ಲಿ ಸಿಂಗರಿಸಲಾಗಿದೆ.

Advertisement

ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಸೇವಾರೂಪದಲ್ಲಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯನ್ನು ಅಲಂಕರಿಸಿದ್ದಾರೆ. ಈ ವರ್ಷ ಬೆಂಗಳೂರು ಗೋಪಾಲ್‌, ಶರವಣ್‌ ಅವರ ತಂಡ ಸುಮಾರು 15 ಲಕ್ಷ ರೂ. ಮೌಲ್ಯದ ವಿವಿಧ ಬಗೆಯ ಹೂ ಫಲವಸ್ತುಗಳಿಂದ ದೇವಸ್ಥಾನವನ್ನು ಸಿಂಗರಿಸಿದ್ದಾರೆ. ಸೇವಾ ರೂಪದಲ್ಲಿ ಲಕ್ಷದಿಪೋತ್ಸವ, ಶಿವರಾತ್ರಿ ಹಾಗೂ ಹೊಸವರ್ಷಗಳಲ್ಲಿ ಭಕ್ತರ ತಂಡವೊಂದು ದೇವಸ್ಥಾನವನ್ನು ಅಲಂಕರಿಸುತ್ತ ಬಂದಿರುವುದು ವಿಶೇಷ ಆಕರ್ಷಣೆಯಾಗಿದೆ.

ಗುರುವಾರ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದ್ದು, ಹೊಸ ವರ್ಷಕ್ಕೆ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next