Advertisement
ಅಮೃತವರ್ಷಿಣಿ ರಾಗದಲ್ಲಿ ಪುಷ್ಪಾಂ ಜಲಿ ಭರತನಾಟ್ಯ ಸಂಯೋಜನೆ ಮೂಲಕ ಪ್ರಾರಂಭವಾದ ಕೃಷ್ಣ ಲೀಲಾ ನೃತ್ಯದ ಮೂಲಕ ಕಲಾಸಕ್ತರನ್ನು ಮಂತ್ರಮುಗ್ಧ ಗೊಳಿಸಿತು. ಅದಿತಿ ಅಶೋಕ್ ಚೊಚ್ಚಲ ನಿರ್ದೇಶನದಲ್ಲಿ ಭರತನಾಟ್ಯ-ಕಥಕ್ ನೃತ್ಯಗಳ ಸಮ್ಮಿಲನದಲ್ಲಿ ಮೂಡಿಬಂದ ಗರುಡಗಮನ ಗರುಡ ಧ್ವಜ ನೃತ್ಯ ಚಪ್ಪಾಳೆ ಗಿಟ್ಟಿಸಿಕೊಂಡಿತು. ಉತ್ತರ ಭಾರತ ಶೈಲಿಯ ಕಥಕ್, ತರಾಣ, ದಕ್ಷಿಣ ಭಾರತದ ಸಂಗೀತ ರೂಪಕ ಸುಗ್ಗಿ, ಬಣ್ಣಗಳ ಆಟ ಹೋಲಿ ಹೋಲಿರೇ ಎಂದು ತಾಳಕ್ಕೆ ತಕ್ಕ ಹೆಜ್ಜೆ ಹಾಕುವುದರೊಂದಿಗೆ ಕಣ್ಮನ ಸೆಳೆಯಿತು.
ಪುತ್ತೂರಿನ ಶ್ರೀ ಜನಾರ್ದನ ಬಿ. ನೇತೃತ್ವದ ಸ್ವರ ಮಾಧುರ್ಯ ಸಂಗೀತ ಬಳಗವು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಶರಣು ಬೆನಕನೆ ಶರಣು ಶರಣು ಹೇ ಬೆನಕನೆ ನಿನಗೆ ವಂದನೆ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಶಂಕರ ನಾದ ಶರೀರ ಪದ ವೇದ ಎಂಬ ಸಹಸ್ರನಾಮಲಿಂಗೇಶ್ವರನನ್ನು ನೆನೆಯುವಂತೆ ಮಾಡಿದರು. ಡಾ| ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.
Related Articles
Advertisement
ಜನಾರ್ದನ ಪುತ್ತೂರು ತಬಲಾ ವಾದಕರಾಗಿ ಸಾಥ್ ನೀಡಿದರು. ರಿದಂ ವಾದಕರಾಗಿ ಸಚಿನ್ ಪುತ್ತೂರು ಹಾಗೂ ಕೀ ಬೋರ್ಡ್ ವಾದಕರಾಗಿ ಅಶ್ವಿನ್ ಸಾಥ್ ನೀಡಿದರು. ಸೋಮವಾರ ಅಮೃತವರ್ಷಿಣಿ ಸಭಾಭವನದಲ್ಲಿ ಕರ್ನಾಟಕ ಕಲಾಶ್ರೀ, ಗಾನ ಕಲಾಭೂಷಣ, ಸಂಗೀತ ಸರಸ್ವತಿ ವಿದ್ವಾನ್ ಡಾ| ಕೆ. ವಾಗೀಶ್ ತಂಡವು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿತ್ತು.
ಕಲಾ ಸೇವೆಮಂಗಳವಾರ ರಾತ್ರಿ 382 ತಂಡಗಳ 1,300 ಕಲಾವಿದರು ವಾಲಗ, ಡೋಲಕ್, ನಾಗಸ್ವರ ವಾದನ ಸೇವೆ ಮಾಡಿದರೆ, 76 ತಂಡಗಳ 326 ಮಂದಿ ಬ್ಯಾಂಡ್ಸೆಟ್, 215 ಮಂದಿ ಶಂಖ, 500 ಮಂದಿ ಡೊಳ್ಳು ಕುಣಿತ, 30 ತಂಡಗಳ 140 ಕಲಾವಿದರು ಕರಡಿ ಮೇಳ, ಚಿಕ್ಕಮೇಳ ಮತ್ತು 57 ತಂಡಗಳ 320 ಕಲಾವಿದರು ವೀರಗಾಸೆ ಕುಣಿತದ ಮೂಲಕ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಸ್ವಾಮಿಗೆ ರಾತ್ರಿ ಇಡೀ ಕಲಾಸೇವೆ ಅರ್ಪಿಸಿದ್ದಾರೆ. ಇದನ್ನು ಸ್ಮರಿಸಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಲಾವಿದರಿಗೆ ಹಾರೈಸಿದರು.