Advertisement

ಧರ್ಮಗುರು ಮಹೇಶ್ ಆತ್ಮಹತ್ಯೆ: ಸಮಗ್ರ ತನಿಖೆಗೆ ಒತ್ತಾಯ

01:12 PM Nov 03, 2019 | Suhan S |

ಉಡುಪಿ :  ಶಿರ್ವ ಚರ್ಚ್ ನ ಧರ್ಮಗುರು ಮಹೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ .ಭಕ್ತರ ಪ್ರತಿಭಟನೆ ತಾರಕಕ್ಕೇರಿದೆ. ಅ.11 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಧರ್ಮಗುರು ಆತ್ಮಹತ್ಯೆಗೆ ಸ್ಪಷ್ಟ ಕಾರಣವೇನೆಂದು ಬಯಲಾಗಬೇಕು, ಪ್ರತಿಭಟನಾ ನಿರತ ಭಕ್ತರ ಆಗ್ರಹಿಸುತ್ತಿದ್ದಾರೆ. ಇಂದು ಬಿಷಪ್ ನೇತೃತ್ವದಲ್ಲಿ ಪಾಲಾನ ಸಮಿತಿ ಸಭೆ ನಡೆಯಲಿದೆ. ಈ ವೇಳೇಯಲ್ಲಿ ಬಿಷಪ್ ಹೊರ ಬಂದು ಮಾತನಾಡಬೇಕೆಂದು ಭಕ್ತರ ಒತ್ತಾಯ ಮಾಡುತ್ತಿದ್ದಾರೆ. ನ್ಯಾಯ ಹಾಗೂ ಪ್ರಕರಣದ ಸತ್ಯಸತ್ಯತೆಯನ್ನು ಬಯಲುಗೊಳಿಸಬೇಕೆಂದು ಭಕ್ತರು ಒತ್ತಾಯ ಮಾಡಿದರರು.

Advertisement

 

ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ಉಂಟಾಯಿತು. ಶನಿವಾರ ರಾತ್ರಿಯೂ ನ್ಯಾಯಕ್ಕಾಗಿ ಆಗ್ರಹಿಸಿ ಭಕ್ತರು  ಪ್ರತಿಭಟನೆ ನಡೆಸಿದ್ದರು.ಆತ್ಮಹತ್ಯೆಗೆ ಕಾರಣವೇನೆಂಬುದು ಬಯಲಾಗಬೇಕು, ಚರ್ಚ್ ವತಿಯಿಂದ ದೂರು ನೀಡಲು ಒತ್ತಾಯ ಮಾಡಿದರು. ಧರ್ಮಗುರು ಮಹೇಶ್ ಮನೆಯವರು ಯಾವುದೇ ದೂರು ನೀಡಲು ಬಯಸಿರಲಿಲ್ಲ ಇದೀಗ ಸಮಗ್ರ ತನಿಖೆಗೆ ಭಕ್ತರ ಒತ್ತಾಯಿಸಿ ಚರ್ಚ್ ಆವರಣದಲ್ಲಿ ನೂರಾರು ಭಕ್ತರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next