Advertisement
ತನ್ನ ನಿರ್ಧಾರದ ಕುರಿತು ಹೆಚ್ಚು ವಿವರಣೆ ನೀಡದ ಮಂಡಳಿ, ಆಟಗಾರ ನೀತಿ ಸಂಹಿತೆಯನ್ನು ಉಲ್ಲಂ ಸಿರುವುದಾಗಿ ತಂಡದ ಆಡಳಿತ ವರದಿ ಮಾಡಿದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಾಥಮಿಕ ತನಿಖೆ ಕೈಗೊಂಡಿತು. ಅದರಂತೆ, ಗುಣತಿಲಕ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ನಡೆ ಯುತ್ತಿರುವ ಪಂದ್ಯದಲ್ಲಿ ಆಡಲು ಅವರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದರೆ ಮಾಧ್ಯಮಗಳ ವರದಿ ಪ್ರಕಾರ, ಪ್ರವಾಸ ಬಂದಿರುವ ನಾರ್ವೆ ಯುವತಿಯೊಬ್ಬರು ದೂರು ನೀಡಿದ್ದು, ವ್ಯಕ್ತಿಯೊಬ್ಬ ತನ್ನನ್ನು ಹೊಟೇಲ್ ಕೊಠಡಿಯೊಂದರಲ್ಲಿ ಅತ್ಯಾಚಾರ ಮಾಡಿದ್ದು, ಈ ವೇಳೆ ದನುಷ್ಕ ಗುಣತಿಲಕ ಅಲ್ಲೇ ಇದ್ದರೆಂದು ಆರೋಪಿಸಿದ್ದಾರೆ.