Advertisement

ವಿಮಾನ ಜಾರಿದ ಪ್ರಕರಣ: ಡಿಜಿಸಿಎ ತನಿಖೆ ಪೂರ್ಣ

02:23 PM Jul 03, 2019 | Team Udayavani |

ಮಂಗಳೂರು: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ರನ್‌ವೇಯಿಂದ ಜಾರಿದ

Advertisement

ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶ ನಾಲಯದ (ಡಿಜಿಸಿಎ) ತಂಡ ತನಿಖೆ ನಡೆಸಿ ತೆರಳಿದೆ. ತನಿಖೆಯ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಾಗೂ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲಿಸಲಿದ್ದು ಇದರ ಆಧಾರದಲ್ಲಿ ಮುಂದಿನ ಕ್ರಮ ಆಗಲಿವೆ. ಇದೇ ವೇಳೆ ಏರ್‌ಇಂಡಿಯಾ
ಎಕ್ಸ್‌ಪ್ರೆಸ್‌ ವತಿಯಿಂದಲೂ ಅಂತರಿಕ ತನಿಖೆ ನಡೆಯು ತ್ತಿದ್ದು ಇದರ ವರದಿ ವಿಮಾನ ಹಾರಾಟ ಸುರಕ್ಷಾ ಮುಖ್ಯಸ್ಥರಿಗೆ ಸಲ್ಲಿಕೆಯಾಗಲಿದೆ.

ರನ್‌ವೇಯಿಂದ ಜಾರಿರುವ ವಿಮಾನವನ್ನು ವಿಮಾನ ನಿಲ್ದಾಣದ ಹೊಸ ವಿಭಾಗಕ್ಕೆ ತಂದು ಇರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಸಮಗ್ರ ತಪಾಸಣೆಯ ನಡೆಸಿ ಎಂಜಿನಿಯರ್‌ಗಳು ವರದಿಯಲ್ಲಿ ಈ ವಿಮಾನ ಹಾರಾಟಕ್ಕೆ ಸಮರ್ಪಕವಾಗಿದೆ ಎಂದು ದೃಢೀಕರಣಗೊಳಿಸಿದ ಬಳಿಕ ಹಾರಾಟದ ಬಗ್ಗೆ ನಿರ್ಧಾರವಾಗಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 7ರಿಂದ 8 ದಿನಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next