Advertisement

ಕರ್ನಾಟಕ ಲಾಕ್ ಡೌನ್- ದೇವಸ್ಥಾನಗಳಿಗೆ ಪ್ರವೇಶ ನಿಷೇಧ: ಗೇಟ್ ನಲ್ಲಿ ಭಕ್ತರ ಪೂಜೆ!

09:59 AM Mar 28, 2020 | keerthan |

ಕಲಬುರಗಿ: ಕೋವಿಡ್-19 ಸೋಂಕು ಭೀತಿಯಿಂದಾಗಿ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಆದೇಶ ಮಾಡಿದ್ದು, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Advertisement

ನಿರ್ಬಂಧ ಮಧ್ಯೆಯೂ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನದ‌ ಗೇಟ್ ನಲ್ಲಿ ಮಂಗಳವಾರ ಭಕ್ತರು ಪೂಜೆ ಸಲ್ಲಿಸಿದರು.‌  ಬೆಳಿಗ್ಗೆ ಮನೆಗಳಿಂದ ಬಂದು ಗೇಟ್ ನಲ್ಲೇ ತೆಂಗಿನ ಕಾಯಿ ಒಡೆದು ಹೂ, ಹಣ್ಣು ಅರ್ಪಿಸಿ ಭಕ್ತಿ ಮೆರೆದರು.

ಚಿತ್ತಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಚಂದ್ರಲಾಂಬಾ ದೇವಸ್ಥಾನದಲ್ಲೂ ಭಕ್ತರಿಗೆ ನಿಷೇಧ ಹೇರಲಾಗಿದೆ. ಮಾ. 31ರ ತನಕ ಯಾವುದೇ ಭಕ್ತರು ದೇಗುಲಕ್ಕೆ ಬರಬೇಡಿ. ಮನೆಯಲ್ಲಿಯೇ ಕುಳಿತು ಕುಟುಂಬದ ಮತ್ತು ನಾಡಿನ ಒಳಿತಿಗಾಗಿ ಜಗನ್ಮಾತೆಗೆ ಪ್ರಾರ್ಥಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next