Advertisement

ಸ್ವರ್ಣಾ ನದಿಯಲ್ಲಿ ಮಿಂದೆದ್ದ ಭಕ್ತರು

03:06 PM Apr 26, 2017 | Team Udayavani |

ಉಡುಪಿ : ಕೃಷ್ಣಾಂಗಾರಕ ಚತುರ್ದಶಿ ಪ್ರಯುಕ್ತ ಮಂಗಳವಾರ ಉಡುಪಿ ಪೆರಂಪಳ್ಳಿಯ ಶೀಂಬ್ರಾ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಸ್ವರ್ಣಾ ನದಿ ಸ್ನಾನ ಘಟ್ಟದಲ್ಲಿ  ಶ್ರೀ ಸೋದೆ, ಶ್ರೀ ಕಾಣಿಯೂರು, ಪರ್ಯಾಯ ಶ್ರೀ ಪೇಜಾವರ ಕಿರಿಯ ಶ್ರೀಗಳು ಆಗಮಿಸಿ ದಂಡತೀರ್ಥಸ್ನಾನ ಹಾಗೂ ನೂರಾರು ಮಂದಿ ಭಕ್ತರು ಪವಿತ್ರ ನದಿಸ್ನಾನ ಮಾಡಿದರು. 

Advertisement

ದೂರದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆಯಿಂದ ನದಿ ಸ್ನಾನ ಮಾಡುವ ಸಲುವಾಗಿ ಸೋಮವಾರ ಸಂಜೆಯೇ ಉಡುಪಿಗೆ ಆಗಮಿಸಿದ್ದರು.   ಕ್ಷೇತ್ರದ ವ್ಯವಸ್ಥಾಪಕ ಕೃಷ್ಣಮೂರ್ತಿ ಶಿವತ್ತಾಯ, ಅರ್ಚಕ ನವೀನ ಶಿವತ್ತಾಯ, ನಾಗರಾಜ ಶಿವತ್ತಾಯ, ವಾಸುದೇವ ಭಟ್‌ ಪೆರಂಪಳ್ಳಿ ವಿಜಯ ಸಾಲ್ಯಾನ್‌, ಗೋಪಾಲ… ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next