Advertisement

ಅಂತಿಮ ದರ್ಶನಕ್ಕೆ ತೆರಳಿದ್ದ ವ್ಯಕ್ತಿ ಸಾವು

12:50 AM Jan 23, 2019 | Team Udayavani |

ಕಡೂರು: ಡಾ.ಶಿವಕುಮಾರ ಶ್ರೀಗಳ ಅಂತಿಮ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಜೀಪು ಮರಕ್ಕೆ ಡಿಕ್ಕಿಯಾಗಿ ಓರ್ವ ಮೃತಪಟ್ಟು ಆರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 206ರ ಕಡೂರು ಸಮೀಪದ ಸಿದ್ರಾಮನಹಳ್ಳಿ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಎಂ. ಎಚ್. ಪರಮೇಶ್ವರಪ್ಪ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Advertisement

ತಾಲೂಕಿನ ಮಲ್ಲೇಶ್ವರ ಗ್ರಾಮದ ಇವರೆಲ್ಲ ಸಿದ್ಧಗಂಗಾ ಮಠಕ್ಕೆ ತೆರಳಿದ್ದರು. ಶ್ರೀಗಳ ದರ್ಶನ ಪಡೆದ ನಂತರ ಗ್ರಾಮಕ್ಕೆ ವಾಪಸ್‌ ಹೊರಟಿದ್ದಾರೆ. ಈ ವೇಳೆ ದುರ್ಘ‌ಟನೆ ಸಂಭವಿಸಿದ್ದು ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಾಹನ ಚಲಾಯಿಸುತ್ತಿದ್ದ ಮಲ್ಲೇಶ್ವರ ಗ್ರಾಪಂ ಸದಸ್ಯ ನಟರಾಜ್‌ಗೆ ತೀವ್ರಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲೇಶ್ವರದ ಲೋಕೇಶಪ್ಪ, ರಾಮು, ಮಹಂತೇಶ್‌, ಚಂದ್ರಶೇಖರ್‌ ಮತ್ತು ಪುಟ್ಟಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next