Advertisement

ಶಿರಸಿ: ದೇವಿಕೇರೆಯ ನವೀಕರಣ ಕಾಮಗಾರಿ ಉದ್ಘಾಟನೆ

09:53 PM Jun 16, 2022 | Team Udayavani |

ಶಿರಸಿ: ಸರಕಾರದ ಜೊತೆ‌ ಜೊತೆಯಲ್ಲಿ ನಮ್ಮೂರಿನ ಅಭಿವೃದ್ದಿಗೆ ನಮ್ಮ‌ ಶಿರಸಿಯ ಸಂಘಟನೆಗಳು ಶ್ರಮಿಸುತ್ತಿವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು. ಗುರುವಾರ ಅವರು ನಗರದ ದೇವಿಕೇರೆಯ ನವೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಶಿರಸಿ ಸುಂದರ ಆಗುತ್ತಿದೆ. ಅಭಿವೃದ್ದಿಯ ವೇಗ ಹೆಮ್ಮೆ ಆಗುತ್ತಿದೆ. ಶಿರಸಿಯ ಅಭಿವೃದ್ದಿಯ ವೇಗ ಖುಷಿ ತಂದಿದೆ ಎಂದ ಅವರು, ಅಭಿವೃದ್ದಿಯ ವೇಗದ ಜೊತೆ ಶಾಂತಿಯುತ ಬದುಕಿಗೂ ಒಟ್ಟಾಗಿ ಇದ್ದೇವೆ. ಅಭಿವೃದ್ದಿಯ‌ ಸವಿ ಸವಿಯಲು ಸಾಧ್ಯವಿದೆ. ಮೂರುವರೆ ಕೋಟಿ ರೂ. ಮೊತ್ತದಲ್ಲಿ ದೇವಿಕೇರೆ 2010 ರಿಂದ ಅಭಿವೃದ್ದಿಯಾಗಿದೆ. ಇದನ್ನು ಸುಂದರಗೊಳಿಸಬೇಕು ಇನ್ನೂ ಅಭಿವೃದ್ದಿ ಆಗಬೇಕೆಂಬುದು ಗೊತ್ತಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರದ ಕೆರೆ ಅಭಿವೃದ್ದಿಗೆ ಪ್ರವಾಸೋದ್ಯಮ ಇಲಾಖೆ, ನಗರಸಭೆ, ಕರಾವಳಿ ಅಭಿವೃದ್ದಿ ಇಲಾಖೆ ಸಹಕಾರದಲ್ಲಿ ಅಭಿವೃದ್ದಿ ಮಾಡಲಾಡಲಾಗಿದೆ. ಹಾಲೊಂಡ, ಕೋಟೆಕೆರೆ ಅಭಿವೃದ್ದಿ ಮಾಡಲಾಗುತ್ತದೆ. ಉಳಿದ‌ ಕೆರೆಗಳ ಅಭಿವೃದ್ದಿಗೂ ಆಸಕ್ತರಾಗಿದ್ದೇವೆ ಎಂದರು.

ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್, ಮಾಜಿ ಅಧ್ಯಕ್ಷ ಪ್ರದೀಪ್ ಶೇಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾರ್,ನಗರಸಭೆ ಸದಸ್ಯೆ ದೀಪಾ ಮಹಾಲಿಂಗಣ್ಣನವರ್, ರಾಘವೇಂದ್ರ ಶೆಟ್ಟಿ,ಡಿ ಎಲ್ ನಾಯ್ಕ ಸೇರಿ ಹಲವರು ಉಪಸ್ಥಿತರಿದ್ದರು. ಪೌರಾಯುಕ್ತ ಕೇಶವ ಚೌಗುಲೆ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next