Advertisement

ಕೆಂಗೇರಿಯಲ್ಲಿ ವಿಜೃಂಭಣೆಯ ಯಲ್ಲಮ್ಮ ದೇವಿ ಕರಗ

12:22 PM Apr 17, 2017 | |

ಕೆಂಗೇರಿ: ಇಲ್ಲಿನ ಶ್ರೀ ಯಲ್ಲಮ್ಮ ದೇವಿ ಕರಗ ಮಹೋತ್ಸವವು ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ, ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ವಿಶೇಷ ಪೂಜಾ ಕಾರ್ಯಗಳ ನಂತರ ಕರಗ ಹೊತ್ತ ಆನಂದ್‌, ಕೆಂಗೇರಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಹಿಂದಿನಿಂದ ನಡೆದುಬಂದಿರುವ ಸಂಪ್ರದಾಯದಂತೆ ಮನೆಗಳ ಮುಂದೆ ರಂಗೋಲಿ ಹಾಕಿ ಕರಗವನ್ನ ಸ್ವಾಗತಿಸಲಾಯಿತು.

Advertisement

ಕರಗದ ಮೇಲೆ ಮಲ್ಲಿಗೆ ಹೂವು ಸಮರ್ಪಿಸುವ ಮೂಲಕ ಸಾರ್ವಜನಿಕರು ಭಕ್ತಿ ಪ್ರದರ್ಶಿಸಿದರು. ರಾತ್ರಿ ಆರಂಭವಾಗಿ ಬೆಳಗಾಗುವವರೆಗೂ ನಡೆದ ಕರಗ ಮಹೋತ್ಸವದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರೆ, ವೀರಕುಮಾರರು ಕೈಯಲ್ಲಿ ಖಡ್ಗ ಹಿಡಿದು, ಗೋವಿಂದ ನಾಮ ಸ್ಮರಣೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಕರಗ ಮಹೋತ್ಸವದ ಮುನ್ನ ದಿನ ನೂರಾರು ಮಹಿಳೆಯರು ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಸಹಿತ ಪೂಜೆ ಸಲ್ಲಿಸಿದರು. ಕರಗದ ದಿನ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು.

ಇದರೊಂದಿಗೆ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಚಂಡೆವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಆಕಷ‌ìಕ ಪ್ರದರ್ಶನ ಕರಗಕ್ಕೆ ಮೆರುಗು ತಂದಿತು. ಶಾಸಕ ಎಸ್‌.ಟಿ.ಸೋಮಶೇಖರ್‌, ಬಿಬಿಎಂಪಿ ಸದಸ್ಯರಾದ ಶಾರದಾ ಮುನಿರಾಜು, ವಿ.ವಿ.ಸತ್ಯನಾರಾಯಣ, ಆರ್ಯ ಶ್ರೀನಿವಾಸ್‌, ಧರ್ಮದರ್ಶಿ ಜೆ.ರಮೇಶ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next