Advertisement

ಉದ್ಯಾನವನಗಳ ಅಭಿವೃದ್ಧಿ

07:44 PM Dec 03, 2020 | Suhan S |

ತುಮಕೂರು: ನಗರದ 21ನೇ ವಾರ್ಡ್‌ನ ಕುವೆಂಪು ನಗರದಲ್ಲಿರುವ ನೇತಾಜಿಉದ್ಯಾನವನವನ್ನು ಸ್ಮಾರ್ಟ್‌ಸಿಟಿವತಿಯಿಂದ ಅಭಿವೃದ್ಧಿ ಪಡಿಸಲು ಒಂದು ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಹೇಳಿದರು.

Advertisement

ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ನಗರದ ನೇತಾಜಿ ಉದ್ಯಾನವನವನ್ನು ನಾಗರಿಕ ವೇದಿಕೆಉತ್ತಮವಾಗಿನಿರ್ವಹಣೆಮಾಡಲಾಗುತ್ತಿದ್ದು,ಈ ಹಿಂದೆ ಟೂಡಾ ವತಿಯಿಂದ ಉದ್ಯಾನಕ್ಕೆಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದ್ದು, ನಗರದಲ್ಲಿರುವ ಅತ್ಯುತ್ತಮ ಪಾರ್ಕ್‌ ಗಳಲ್ಲಿ ಒಂದಾಗಿದೆ ಎಂದರು.

ನಾಗರಿಕ ಸಮಿತಿಗೆ ಧನ್ಯವಾದಗಳು: ಸ್ಮಾರ್ಟ್‌ಸಿಟಿಯಿಂದ ಬಿಡುಗಡೆಯಾಗಿರುವ ಅನು ದಾನದಲ್ಲಿ ವಾಕಿಂಗ್‌ ಪಾಥ್‌, ಮಕ್ಕಳ ಆಟೋಪಕರಣ ಹಾಗೂ ಹಿರಿಯ ನಾಗರಿಕರಿಗೂ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಲು ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಉದ್ಯಾನವನವನ್ನು ಉತ್ತಮ ವಾಗಿ ನಿರ್ವಹಣೆ ಮಾಡಿದ ನಾಗರಿಕರ ಸಮಿತಿಗೆ ಧನ್ಯವಾದವನ್ನು ತಿಳಿಸಿದರು.

ಅತ್ಯಾಧುನಿಕ ಉದ್ಯಾನವನ ನಿರ್ಮಾಣ: ತುಮಕೂರು ನಗರದಲ್ಲಿರುವ ನೇತಾಜಿ ಉದ್ಯಾನವನ್ನು ನಾಗರಿಕರೆ ಅತ್ಯುತ್ತಮವಾದ ಉದ್ಯಾನವನ್ನು ನಿರ್ವಹಣೆ ಮಾಡಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇಲೆಎದರ್ಜೆಯಲ್ಲಿರುವ ಈಉದ್ಯಾನ ವನದ ಅಭಿವೃದ್ಧಿಗಾಗಿ ಒಂದು ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದ್ದು, ಈ ಪಾರ್ಕ್‌ನಲ್ಲಿ ಐಟಿ ಕಾಂಪೋನೆಂಟ್‌, ಸಿ.ಸಿ. ಟಿವಿ ಕ್ಯಾಮೆರಾ, ಪ್ಯಾನಿಕ್‌ ಬಟನ್‌ಸೇರಿದಂತೆ ಅತ್ಯಾಧುನಿಕ ಉದ್ಯಾನವನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಉದ್ಯಾನವನ ನಿರ್ವಹಣೆ: ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸುತ್ತಿರುವ ಉದ್ಯಾನವನವನ್ನು ನಿರ್ವಹಣೆಯನ್ನು ಪಾಲಿಕೆಯೊಂದಿಗೆ ಸೇರಿಈಭಾಗದ ನಾಗರಿಕರು ಮಾಡಿದರೆ ಉತ್ತಮವಾಗಿ ಉಳಿಯುತ್ತದೆ ಎಂದ ಅವರು, ಪಾಲಿಕೆಯ ವಾರ್ಡ್‌ಗಳಿಗೆ ಸಿಗದ ಅನುದಾನವನ್ನು ಉದ್ಯಾನವನದ ಅಭಿವೃದ್ಧಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂ ರಪ್ಪ ಅವರಿಗೆ ನಾಗರಿಕರು ಧನ್ಯವಾದವನ್ನು ಸಲ್ಲಿಸಬೇಕು ಎಂದು ಹೇಳಿದರು.

Advertisement

ಸಾರ್ವಜನಿಕರಲ್ಲಿ ಮನವಿ: ಪಾಲಿಕೆ ಮೇಯರ್‌ ಫ‌ರೀದಾಬೇಗಂ ಮಾತನಾಡಿ, ನಿರ್ವಹಣೆ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಉದ್ಯಾನವನ್ನು ಅಭಿವೃದ್ಧಿಪಡಿಸಲು ಶಾಸಕರು ಸ್ಮಾರ್ಟ್‌ಸಿಟಿಯಿಂದ ಅನುದಾನ ವನ್ನು ನೀಡಿದ್ದು, ಸಾರ್ವಜನಿಕರು ಯಾರಾದರೂ ದತ್ತು ತೆಗೆದುಕೊಂಡು ನಿಮ್ಮ ಉದ್ಯಾನವನವನ್ನು ನೀವೇ ಉಳಿಸಿಕೊಳ್ಳಬೇಕು, ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸಿದಂತೆ ಉಳಿಸಿಕೊಂಡು ನಿರ್ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪಾಲಿಕೆ ಸದಸ್ಯೆ ಲಲಿತಾ ರವೀಶ್‌ ಮಾತನಾಡಿ, ಈ ಭಾಗದಲ್ಲಿ ನಾಗರಿಕರ ಅನುಕೂಲವಾಗಿದ್ದ ಪಾರ್ಕ್‌ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು,ನಾಗರಿಕರಹಿತದೃಷ್ಟಿಯಿಂದ ಶಾಸಕರು ಅನುದಾನವನ್ನು ಒದಗಿಸಿದ್ದು, ಇದರಿಂದ ಪಾರ್ಕ್‌ ಅತ್ಯಾಧುನಿಕವಾಗಿ ರೂಪುಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಉಪಮೇಯರ್‌ ಶಶಿಕಲಾ ಗಂಗ ಹನುಮಯ್ಯ ಸೇರಿದಂತೆ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇದ್ದರು.

ನಗರದಲ್ಲಿ ಇರುವ ಕೆಲವು ಉದ್ಯಾನವನಗಳನ್ನು ಸ್ಮಾರ್ಟ್‌ ಸಿಟಿಯೋಜನೆಯಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂಕೆಲವು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಭಿವೃದ್ಧಿ ಪಡಿಸಿರುವ ಉದ್ಯಾನವನಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಅಲ್ಲಿಯ ನಾಗರಿಕರ ಜವಾಬ್ದಾರಿಯಾಗಿರುತ್ತದೆ. ಜಿ.ಬಿ.ಜ್ಯೋತಿಗಣೇಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next