Advertisement

ಉದ್ಯಮ ಶೀಲತೆಯಿಂದ ಅಭಿವೃದ್ಧಿ ಸಾಧ್ಯ

03:18 PM Jan 21, 2021 | Team Udayavani |

ಧಾರವಾಡ: ಉದ್ಯಮ ಶೀಲತೆಯನ್ನು ಮೈಗೂಡಿಸಿಕೊಂಡಾಗಲೇ ಸ್ವ ಉದ್ಯೋಗದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ರುಡ್‌ಸೆಟ್‌ ಸಂಸ್ಥೆ ಅಧ್ಯಕ್ಷರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಇಲ್ಲಿನ ರುಡ್‌ಸೆಟ್‌ ಸಂಸ್ಥೆ ಹಮ್ಮಿಕೊಂಡಿರುವ ಮಹಿಳೆಯರಿಗಾಗಿ ವಸ್ತ್ರ ವಿನ್ಯಾಸ ತರಬೇತಿ, ಪುರುಷರಿಗಾಗಿ ದ್ವಿಚಕ್ರ ವಾಹನ ರಿಪೇರಿ ಹಾಗೂ ಫೋಟೋಗ್ರಾಫಿ-ವಿಡಿಯೋಗ್ರಾಫಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ವಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಹಣ ಮಾತ್ರ ಮುಖ್ಯವಲ್ಲ. ಬದಲಾಗಿ ಜ್ಞಾನ, ಕೌಶಲ್ಯ, ಸೃಜನಶೀಲತೆ, ಸಮಯ ಪ್ರಜ್ಞೆ ಮತ್ತು ಅನುಭವ ಆಧಾರದ ಮೇಲೆ ಸ್ವಂತ ಉದ್ಯೋಗದಲ್ಲಿ ಯಶಸನ್ನು ಗಳಿಸಬಹುದು. ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸುವುದರ ಮೂಲಕ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು. ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಕೌಶಲ್ಯ ವೃದ್ಧಿಪಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ:ಐದು ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ; ಎಚ್‌.ಎಂ. ಶ್ರೀನಿವಾಸ

ಅತಿಥಿ ಉಪನ್ಯಾಸಕರಾದ ಅಮೃತ್‌ ಚರಂತಿಮಠ, ಚಂದ್ರಕಾಂತ ಹಾಗೂ ಶೋಭಾ ದುರ್ಗಾ ಇದ್ದರು. ಸಂಸ್ಥೆ ನಿರ್ದೇಶಕ ರಾಜೇಂದ್ರ ಕಗ್ಗೊàಡಿ ಸ್ವಾಗತಿಸಿದರು. ಜಗದೀಶ ಪೂಜಾರ ನಿರೂಪಿಸಿದರು. ಚನ್ನಪ್ಪಾ ದೇವಗಿರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next