Advertisement

ದೊಡ್ಡಗೌಡ್ರು, ಸಿದ್ದರಾಮಯ್ಯರದ್ದು ಆಚಾರವಿಲ್ಲದ ನಾಲಿಗೆ: ಸಿ.ಟಿ.ರವಿ

06:10 AM Oct 22, 2018 | Team Udayavani |

ಶಿವಮೊಗ್ಗ: ದೀಪಾವಳಿ ಹಬ್ಬ ಆದ ಮೇಲೆ ಇಲ್ಲಿಗೆ ಹಗಲು ವೇಷದವರು ಬರುತ್ತಾರೆ. ಬೆಂಗಳೂರಲ್ಲಿ ದಸರಾ ಹಬ್ಬದ ಮರುದಿನವೇ ಹಗಲು ವೇಷದವರ ಸುದ್ದಿಗೋಷ್ಠಿ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗಲು ವೇಷದವರಂತೆ ಒಗ್ಗಟ್ಟಿನ ಅಭಿನಯದೊಂದಿಗೆ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಟೀಕಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರು ತಿಂಗಳ ಹಿಂದೆ ದೊಡ್ಡಗೌಡರ ಡೈಲಾಗ್‌ ಬೇರೆಯೇ ಇತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಅಧಿಕಾರಕ್ಕಾಗಿ ಇವರು ಏನೆಲ್ಲ ಮಾಡುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಕೆಲ ತಿಂಗಳುಗಳ ಹಿಂದೆ ದೇವೇಗೌಡರು “ನನ್ನ ರಾಜಕೀಯ ಜೀವನದಲ್ಲೇ ಸಿದ್ದರಾಮಯ್ಯ ರೀತಿಯ ಸಿಎಂ ನೋಡಿರಲಿಲ್ಲ. ಕಾಂಗ್ರೆಸ್‌ ಸೋಲಿಸುವುದೇ ನನ್ನ ಕೊನೆಯ ಆಸೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, “ಜೆಡಿಎಸ್‌ ಬಿಜೆಪಿಯ ಬಿ- ಟೀಂ, ಅದು ಧೃತರಾಷ್ಟ್ರನ ಜಾತಿ, ಅಲ್ಲಿದ್ದರೆ ಯಾರೂ ಬೆಳೆಯೋದಿಲ್ಲ’ ಎಂದಿದ್ದರು. ಹೀಗೆಲ್ಲ ಮಾತನಾಡಿದವರು ಈಗ ಒಂದಾಗಿದ್ದಾರೆ. ದಾಸಶ್ರೇಷ್ಠರು ಹೇಳಿದ ಆಚಾರವಿಲ್ಲದ ನಾಲಿಗೆ ಎಂಬ ಮಾತು ಕಾಂಗ್ರೆಸ್‌-ಜೆಡಿಎಸ್‌ನವರಿಗೆ ಸರಿಯಾಗಿ ಹೊಂದುತ್ತದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next