Advertisement

ಸದ್ಬಳಕೆಯಾಗದ ದೇವರಾಜ ಅರಸ ಭವನ

10:17 AM Nov 16, 2021 | Team Udayavani |

ಚಿಂಚೋಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಿರ್ಮಿಸಿದ ಡಿ. ದೇವರಾಜ ಅರಸ ಭವನದಲ್ಲಿ ಸರಕಾರ ಕಾರ್ಯಕ್ರಮ, ಸಭೆ-ಸಮಾರಂಭ ನಡೆಯುತ್ತಿಲ್ಲ. ಇದರಿಂದ ಭವನ ಬಿಕೋ ಎನ್ನುತ್ತಿದೆ.

Advertisement

ಜಿಲ್ಲಾ ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಭವನ ನಿರ್ಮಿಸುವುದಕ್ಕಾಗಿ ಸರಕಾರದಿಂದ ಒಂದು ಕೋಟಿ ರೂ. ಮಂಜೂರು ಮಾಡಲಾಗಿತ್ತು. ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಮಗಕ್ಕೆ ಕಾಮಗಾರಿ ವಹಿಸಿಕೊಡಲಾಗಿತ್ತು. ಇದೀಗ ಭವನ ಕಾಮಗಾರಿ ಪೂರ್ಣಗೊಂಡು ಒಂದು ವರ್ಷವೇ ಕಳೆದಿದೆ.

ಆದರೆ ಡಿ.ದೇವರಾಜ ಅರಸ ಭವನದಲ್ಲಿ ಸರಕಾರಿ ಕಾರ್ಯಕ್ರಮ ನಡೆಸದೆ ಇರುವುದರಿಂದ ಭವನ ಇದೀಗ ಅನಾಥವಾಗಿದೆ ಎಂದು ಸಮಾಜ ಸೇವಕ ಸಂತೋಷ ಗುತ್ತೆದಾರ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next