Advertisement

ಪೌರತ್ವ ಕಾಯ್ದೆಯಿಂದ ತೊಂದರೆಯಾಗದು

11:54 AM Jan 09, 2020 | Naveen |

ದೇವರಹಿಪ್ಪರಗಿ: ಪೌರತ್ವ ಕಾಯ್ದೆಯಿಂದ ದೇಶದ ಯಾವೊಬ್ಬ ಭಾರತೀಯರಿಗೂ ತೊಂದರೆಯಾಗದು. ವಿನಾಕಾರಣ ಕಾಂಗ್ರೆಸ್‌ನವರು ದೇಶದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದಾರೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

Advertisement

ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯಿಂದ ತೊಂದರೆ ಇರದಿದ್ದರೂ ಕಾಂಗ್ರೆಸ್‌ ತನ್ನ ಬೇಳೆ ಬೇಯಿಸಿಕೊಳ್ಳಲು ಒಂದು ಸಮುದಾಯವನ್ನು ಎತ್ತಿ ಕಟ್ಟುತ್ತಿದೆ. ಸ್ವಾರ್ಥ ರಾಜಕೀಯಕ್ಕಾಗಿ ಅಮಾಯಕರನ್ನು ಬೀದಿಗಿಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಅಲ್ಲಾಪುರ ಮಾತನಾಡಿ, ಪೌರತ್ವ ಕಾಯ್ದೆ ಯಾರ ವಿರೋಧವೂ ಅಲ್ಲ-ಪರವೂ ಅಲ್ಲ. ದೇಶದ ಒಳಿತಿಗಾಗಿ ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿ ಬಿಜೆಪಿ ಪಕ್ಷದ ವತಿಯಿಂದ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಮಹಾಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ. ಕ್ಷೇತ್ರದ 6 ಮಹಾಶಕ್ತಿ ಕೇಂದ್ರಗಳ ಮೂಲಕ 353 ಬೂತ್‌ಗಳಿಗೂ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಭಿತ್ತಿ ಪತ್ರ ಹಂಚುವ ಜೊತೆಗೆ ಜಾಗೃತಿ ಮೂಡಿಸಲಿದ್ದಾರೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದರು.

ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ, ರಮೇಶ ಮಸಬಿನಾಳ, ರಾಜು ಮೆಟಗಾರ, ಮಡುಗೌಡ ಬಿರಾದಾರ, ಸಂಗಮೇಶ ಮಸಬಿನಾಳ, ಶಂಖರಗೌಡ ಕೋಟಿಖಾನಿ, ಸೋಮು ಹಿರೇಮಠ, ರಾಘವೇಂದ್ರ ಗುಡಿಮನಿ, ಕಾಶೀನಾಥ ಚವ್ಹಾಣ, ಭೀಮನಗೌಡ ಲಚ್ಯಾಣ, ರಾವುತ್‌ ಅಗಸರ, ಶ್ರೀಕಾಂತ ಭಜಂತ್ರಿ, ರಮೇಶ ಈಳಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next