Advertisement

ಸಾಮಾಜಿಕ ಅಂತರ ಪಾಲನೆ ಮಾಯ

12:22 PM Jun 11, 2020 | Naveen |

ದೇವದುರ್ಗ: ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. ಆದರೂ ಸರ್ಕಾರಿ ಕಚೇರಿ ಸೇರಿ ತಾಲೂಕಿನಾದ್ಯಂತ ಕೋವಿಡ್ ತಡೆಗೆ ಸರ್ಕಾರ ಆದೇಶಿಸಿದ ನಿಯಮ ಪಾಲನೆ ಆಗುತ್ತಿಲ್ಲ.

Advertisement

ಸರ್ಕಾರಿ ಕಚೇರಿಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಿದ್ದರೂ ಸರ್ಕಾರಿ ಕಚೇರಿ, ಅಂಗಡಿ, ಹೋಟೆಲ್‌ ಗಳಲ್ಲಿ ಸಾರ್ವಜನಿಕರು ಈ ನಿಯಮ ಪಾಲಿಸುತ್ತಿಲ್ಲ. ಕೆಲವರಷ್ಟೇ ಅಲ್ಲಲ್ಲಿ ಮಾಸ್ಕ್ ಧರಿಸಿ ಸಂಚರಿಸುತ್ತಿದ್ದು, ಬಹುತೇಕ ಬೈಕ್‌ ಸವಾರರು, ಪಾದಚಾರಿಗಳು ಮಾಸ್ಕ್ ಧರಿಸುತ್ತಿಲ್ಲ. ಸರ್ಕಾರಿ ಕಚೇರಿ, ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಹೋಟೆಲ್‌ ಗಳಲ್ಲಿ ಆರೇಳು ಜನ ಗುಂಪು ಗುಂಪಾಗಿ ಒಬ್ಬರಿಗೊಬ್ಬರು ಅಂಟಿಕೊಂಡು ಕೂಡ್ರುವುದು ಸಾಮಾನ್ಯವಾಗಿದೆ.

ತಹಶೀಲ್ದಾರ್‌ ಕಚೇರಿ ಸುತ್ತಲಿನ ಹೋಟೆಲ್‌ಗ‌ಳಲ್ಲಿ ಇಂತಹ ದೃಶ್ಯ ಕಂಡುಬರುತ್ತಿದೆ. ಮಾಸ್ಕ್ ಧರಿಸದವರಿಗೆ ಗ್ರಾಮೀಣ ಭಾಗದಲ್ಲಿ 100 ರೂ., ಪಟ್ಟಣದಲ್ಲಿ 200 ರೂ. ದಂಡ ವಿಧಿಸಲು ಆದೇಶಿಸಲಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಯಾರೊಬ್ಬರಿಗೂ ದಂಡ ವಿಧಿಸದ್ದರಿಂದ ಜನರಿಗೆ ಯಾವುದೇ ಭಯವಿಲ್ಲದಂತಾಗಿದೆ. ಹೀಗಾಗಿ ತಾಲೂಕಿನಲ್ಲಿ ಸೋಂಕು ಮತ್ತಷ್ಟು ಹೆಚ್ಚುವ ಭೀತಿ ಕಾಡುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ನಿಯಮ ಪಾಲಿಸದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಬೇಕೆಂದು ನಿವೃತ್ತ ಶಿಕ್ಷಕ ಶರಣಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next